ಹುಬ್ಬಳ್ಳಿ:- ಗಾಂಧೀಜಿ ಹತ್ಯೆಯ ಆರೋಪ ಮಾಡುತ್ತಾ ಕಾಂಗ್ರೆಸ್ ಪಕ್ಷ 30-40 ವರ್ಷಗಳ ಕಾಲ ದೇಶವನ್ನಾಳಿದೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಈಶ್ವರಪ್ಪ ತಮ್ಮ ಮಾತನ್ನು ಡಿಫೆಂಡ್ ಮಾಡಿಕೊಂಡಿದ್ದಾರೆ. ಆದರೆ ತಾನು ಹೇಳುವುದೇನೆಂದರೆ ಯಾರೇ ಆಗಲಿ, ಆ ಕಡೆಯವರಾಗಲೀ ಈ ಕಡೆಯವರಾಗಲೀ ಲಕ್ಷ್ಮಣ ರೇಖೆಯನ್ನು ದಾಟಬಾರದು, ಈ ಮಾತನ್ನು ಸದಾ ಪ್ರತಿಪಾದಿಸುತ್ತಾ ಬಂದಿರುವುದಾಗಿ ಹೇಳಿದರು. ಮುಂದುವರಿದು ಮಾತಾಡಿದ ಅವರು ಗಾಂಧೀಜಿಯನ್ನು ಕೊಂದ ಆರೋಪ ಹೊರಿಸುತ್ತಲೇ ಅವರು 30-40 ವರ್ಷಗಳ ಕಾಲ ಸರ್ಕಾರ ನಡೆಸಿದ್ದಾರೆ, ಗಾಂಧಿ ಕೊಲೆ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧವಿಲ್ಲ ಅನ್ನೋದು ಬಹಳಷ್ಟು ಸಲ ಸಾಬೀತಾಗಿದೆ, ಅದು ಈಗ ಮುಗಿದುಹೋದ ಅಧ್ಯಾಯ, ಕಾಂಗ್ರೆಸ್ ಪಕ್ಷದವರು ಜನರನ್ನು ನಿರಂತರವಾಗಿ ಮೂರ್ಖರಾಗಿಸಲಾರರು ಎಂದು ಹೇಳಿದರು.