ಧಾರವಾಡ: ಕಳೆದ ಐದಾರು ದಿನಗಳಿಂದ ವಿದ್ಯಾಕಾಶಿಯಲ್ಲಿ ನಡೆದ ಹತ್ಯೆ ಪ್ರಕರಣಗಳಿಂದ ಬೆಚ್ಚಿಬಿದ್ದ ಧಾರವಾಡ ಜನತೆಗೆ ಧೈರ್ಯ ಹೇಳುವ ನಿಟ್ಟಿನಲ್ಲಿ ಪೊಲೀಸ್ ಅಧಿಕಾರಿಗಳು ನೈಟ್ ಗಸ್ತು ಹೆಚ್ಚು ಮಾಡಿದ್ದು, ಈ ವೇಳೆ ವಿವಿಧ ಹುದ್ದೆಗಳಿಗೆ ಧಾರವಾಡದಲ್ಲಿ ತರಭೇತಿ ಪಡೆಯಲು ಬಂದಿದ್ದ ಯುವಕರಿಗೆ ಪೊಲೀಸ್ ಅಧಿಕಾರಿಗಳು ಜನರಲ್ ನಾಲೆಡ್ಜ್ ಪಾಠ ಮಾಡಿದ್ದಾರೆ. ನಗರದ ಸಪ್ತಾಪುರ ಬಳಿ ಗಸ್ತಿಗಾಗಿ ಬಂದಿದ್ದ ಉಪನಗರ ಪೊಲೀಸ್ ಠಾಣೆಯ ಸಿಪಿಐ ದಯಾನಂದ ಶೆಗುಣಸಿ ಅವರು ವಿವಿಧ ಹುದ್ದೆಗಳ ತರಬೇತಿಗೆ ಬಂದಿದ್ದ ಯುವಕರಿಗೆ ಕರೆಂಟ್ ಅಫೇರ್ಸ್ ಜೊತೆಗೆ ಸಾಮನ್ಯ ಜ್ಞಾನದ ಬಗ್ಗೆ ತಿಳಿ ಹೇಳಿ ಮಾದರಿಯಾಗಿದ್ದಾರೆ.
ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ ಸೂಚನೆ ಮೇರೆಗೆ ಕಳೆದ ಶುಕ್ರವಾರದಿಂದ ನಗರದಲ್ಲಿ ಪೊಲೀಸರು ಗಸ್ತು ಹೆಚ್ಚು ಮಾಡಿದ್ದು, ಬ್ಯೂಸಿ ಸೆಡ್ಯೂಲ್ ನಡುವೆಯೂ ಯುವಕರಿಗೆ ಓದಿನ ಕುರಿತು ಹಾಗೂ ಪರೀಕ್ಷೆ ತಯಾರಿ ಕುರಿತು ಕೆಲವು ಟಿಪ್ಸ್ಗಳನ್ನು ನೀಡಿ ಯುಥ್ ಪ್ರಂಡ್ಲಿ ಪೊಲೀಸ್ ಅಧಿಕಾರಿಯಾಗಿದ್ದಾರೆ. ಇನ್ನೂ ಯುವಕರು ಕೂಡಾ ಪೊಲೀಸ್ ಅಧಿಕಾರಿ ದಯಾನಂದವರ ಸಲಹೆ ಸೂಚನೆಗಳನ್ನು ಹತ್ತು ನಿಮಿಷಕ್ಕೂ ಹೆಚ್ಚು ಕಾಲ ನಿಂತು ಆಲಿಸಿ, ಸರ್ಕಾರಿ ಹುದ್ದೆ ಒಡೆದುಕೊಳ್ಳುವ ಕುರಿತು ಮಾಹಿತಿ ಪಡೆದುಕೊಂಡರು.