ಕಲಬುರಗಿ: ಮಲ್ಲಿಕಾರ್ಜುನ್ ಖರ್ಗೆ ಹೊಟ್ಟೆಯಲ್ಲಿ ಪ್ರಿಯಾಂಕ್ ಕೆಟ್ಟ ಹುಳ ಹುಟ್ಟಿರುವಂತಿದೆ ಮಾಜಿ ಡಿಸಿಎಂ ಈಶ್ವರಪ್ಪ ಹೇಳಿಕೆ ಸಚಿವ ಪ್ರಿಯಾಂಕ್ ಖರ್ಗೆ ಖಾರವಾಗಿ ಕೌಂಟರ್ ಕೊಟ್ಟಿದ್ದಾರೆ.. ಕಲಬುರಗಿಯಲ್ಲಿಂದು ಮಾತನಾಡಿದ ಪ್ರಿಯಾಂಕ್ ಖರ್ಗೆ ಈಶ್ವರಪ್ಪ ಸಂಸ್ಕೃತಿ ಬಹಳ ಚೆನ್ನಾಗಿ ಎದ್ದು ತೋರಿಸುತ್ತೆ ಈಶ್ವರಪ್ಪ ಏನಾದರು ಬಾಯಿ ಬಡಿದುಕೊಳ್ಳಲಿ ಎಲ್ಲಾದರೂ ಬಟ್ಟೆ ಹರಿದುಕೊಳ್ಳಲಿ ನಾನೇಕೆ ಚಿಂತೆ ಮಾಡ್ಲಿ ನಾನು ಕೆಟ್ಟ ಹುಳನೋ ಒಳ್ಳೆ ಹುಳ ತಗೊಂಡು ನಿಮಗ್ಯಾಕೆ ಅಂದ್ರು.
ಮಾತ್ರವಲ್ಲ ನಮ್ಮ ತಂದೆ ತಾಯಿ ತಾನೆ ನನಗೆ ಸಂಭಾಳಿಸ್ತಿರೋದು, ಚಿತ್ತಾಪುರದ ಕ್ಷೇತ್ರದ ಜನರು ನನ್ನ ಆಶಿರ್ವಾದ ಮಾಡಿರೋದು, ನಿಮಗ್ಯಾಕೆ ಬಿಜೆಪಿಯವರು ಆಶಿರ್ವಾದ ಮಾಡ್ತಿಲ್ಲ ಅದನ್ನ ಹೇಳಿ ಅಂತ ಕೌಂಟರ್ ಕೊಟ್ರು.. ಸಿಎಂ ಅವರು ಹೇಳಿದ ಹಾಗೆ ಇವರ ಮೆದುಳಿಗೆ & ನಾಲಿಗೆ ಕನೆಕ್ಷನ್ ಇಲ್ಲ. ನಿಮ್ಮ ಹಿರಿತನಕ್ಕೆ ಗೌರವ ಕೊಟ್ಟು ನೀವು ಅಂತಾ ಮಾತಾಡ್ತಿದ್ದೆನೆ ತಿಳ್ಕೊಳ್ಳಿ ಅಂತ ತಿರುಗೇಟು ಕೊಟ್ರು.