ಬೆಳಗಾವಿ:– ಚುನಾವಣೆ ಸಂದರ್ಭದಲ್ಲಿ ಬಡವರಿಗೆ ಇಲ್ಲದ ಸಲ್ಲದ ಯೋಜನೆಗಳ ಆಮಿಷ ತೋರಿಸಿ ಗೆದ್ದು ಬೀಗುವ ಜನಪ್ರತಿನಿಧಿಗಳೇ ಈ ತೋಟದ ವಸತಿ ಜನರ ಮನೆಯ ಸ್ಥಿತಿಯನ್ನ ನೋಡಿ ನಾಚಿ..! ಧಶಕಗಳೇ ಕಳೆದರೂ ಒಂದು ಮನೆಯ ಸೂರು ಕಲ್ಪಿಸದ ಜನಪ್ರತಿನಿಧಿಗಳಿಗೆ ನಮ್ಮ ಧಿಕ್ಕಾರ.! ಯಾವೊಬ್ಬ ಮೇಲಾಧಿಕಾರಿಗಳಿಗೂ ಕಾಣದೇ ಹೋಯ್ತಾ ಈ ಬಡ ಕುಟುಂಬದ ದುಸ್ಥಿತಿ.!? ಅದ್ಯಾಕೆ ಗಮನಹರಸ್ತಿರಾ ಬಿಡಿ,ಇಲ್ಲಿ ಕೈ ಬೆಚ್ಚಗೆ ಮಾಡುವವರಿಗೆ ಮಾತ್ರ ನಿಮ್ಮ ಯೋಜನೆಗಳು ಸಿಮೀತವಾದುವಾ.? ಅಷ್ಟಕ್ಕೂ ಏನಿದು ಸ್ಟೋರಿ ಅಂತಿರಾ ನೀವೆ ನೋಡಿ…
Chamarajanagara: ಗಡಿ ಜಿಲ್ಲೆಯ ಪ್ರಸಿದ್ಧ ದೇವಸ್ಥಾನದಲ್ಲಿ ಕ್ಯಾಮೆರಾ, ಡ್ರೋನ್ ಚಿತ್ರೀಕರಣ ನಿಷೇಧ !
ಕಾಗವಾಡ ವಿಧಾನಸಭಾ ವ್ಯಾಪ್ತಿಯ ಆಜೂರ ಗ್ರಾಮದ ರೂಪಾಲಿ ಶ್ರೀಶೈಲ ಮಡಿವಾಳ ಕುಟುಂಬದ ಗೋಳು ಕೇಳುವವರೇ ಇಲ್ಲದಂತಾಗಿದೆ ಪಾಳು ಬಿದ್ದ ಮನೆಯಲ್ಲೆ ಬದುಕು ನಡೆಸುವ ಅನಿವಾರ್ಯತೆ ಎದುರಾಗಿದೆ.
ಬೆಳಗಾವಿ ಜಿಲ್ಲೆ ಕಾಗವಾಡ ವಿಧಾನ ಸಭಾ ಕ್ಷೇತ್ರದ ಖಿಳೆಗಾಂವ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಒಳಪಡುವ ಆಜೂರ ಗ್ರಾಮದಲ್ಲಿ ಕಂಡು ಬಂದ ಅವ್ಯವಸ್ಥೆ ಇದು. ಸುಮಾರು ಆರು ಜನ ವಾಸಿಸುವ ಮನೆ ಈಗ ಪಾಳು ಬಿದ್ದ ಭೂತ ಬಂಗಲೆಯ ರೀತಿಯಾಗಿದೆ. ಜನಪ್ರತಿನಿಧಿಗಳಿಗೆ ಚುನಾವಣೆ ಬಂದಾಗ ಮಾತ್ರ ನೆನಪಿಗೆ ಬರುವ ಇಂದಹ ಬಡಕುಟುಂಬ ಗಳ ಪರಿಸ್ಥಿತಿಯನ್ನ ಒಮ್ಮೆಯಾದರೂ ಅವಲೋಕಿಸಿದ್ದಿರಾ @ಜನಪಾಲತಿನಿಧಿಗಳೆ, ಸಂಬಂಧ ಪಟ್ಟ ಮೇಲಾಧಿಕಾರಿಗಳೇ..!
ಬೀದಿಯಲ್ಲೆ ಬದುಕು ಸಾಗಿಸುತ್ತಿದ್ದರು ಯಾವೊಬ್ಬ ಪುಣ್ಯಾತ್ಮರು ಗಮನಹರಿಸದೆಯಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.
ಈ ಸ್ಟೋರಿಯನ್ನ ನೋಡಿಯಾದ್ರೂ ಬಡ ಕುಟುಂಬಕ್ಕೆ ಮನೆಯ ಸೂರು ಕಲ್ಪಿಸುವ ಕಾರ್ಯಕ್ಕೆ
ಜನಪ್ರತಿನಿದಿಗಳು ಹಾಗೂ ಸ್ಥಳೀಯ ಅಧಿಕಾರಿಗಳು ಮುಂದೋಗ್ತಾರಾ ಎಂಬುದನ್ನ ಕಾದುನೋಡಬೇಕಿದೆ.