ಹಾವೇರಿ- ಸರ್ಕಾರದ ಐದು ಗ್ಯಾರಂಟಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಮತ್ತು ಈ ಕುರಿತು ಜನರಲ್ಲಿ ಅರಿವು ಮೂಡಿಸುವ ಸಮಾವೇಶವನ್ನ ಇಂದು ಅದ್ದೂರಿಯಾಗಿ ನಡೆಸಲಾಗಿದೆ.
ಅದು ಉತ್ತರ ಕರ್ನಾಟಕದಲ್ಲಿಯೇ ಮೊದಲ ಬಾರಿಗೆ ಜಿಲ್ಲೆಯ ಹಾನಗಲ್ ತಾಲೂಕಿನ ಅಕ್ಕಿಆಲೂರು ಹೋಬಳಿ ಮಟ್ಟದಲ್ಲಿ ಇಂದು ಜಿಲ್ಲಾಡಳಿತವು ಆಯೋಜನೆ ಮಾಡಿತ್ತು.ಈ ಸಮಾವೇಶವನ್ನು ಶಾಸಕ ಶ್ರೀನಿವಾಸ್ ಮಾನೆ ಹಾಗೂ ಮಹಿಳಾ ಫಲಾನುಭವಿಗಳು ಉದ್ಘಾಟನೆ ಮಾಡಿ ಗ್ಯಾರಂಟಿಗಳ ಬಗ್ಗೆ ಗುಣಗಾನ ಮಾಡಿದರು.ಅಕ್ಕಿಆಲೂರಿನ ಕಾಲೇಜಿನಲ್ಲಿ ಅದ್ದೂರಿಯಾಗಿ ವೇದಿಕೆ ಹಾಕಿ ಸಾವಿರಾರು ಜನರು ಭಾಗಿಯಾಗಿ ಗ್ಯಾರಂಟಿಗಳ ಬಗ್ಗೆ ಮಾಹಿತಿ ಪಡೆದರು.
ಶಕ್ತಿಯೋಜನೆ ,ಅನ್ನಭಾಗ್ಯ,ಗೃಹಲಕ್ಷ್ಮಿ ,ಗೃಹಜ್ಯೋತಿ,ಯುವನಿಧಿ ಯೋಜನೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ಕೌಂಟರ್ ಗಳನ್ನು ತೆರೆಯಲಾಗಿತ್ತು.ಈ ವೇಳೆ ಮಾಹಿತಿ ಇರದ ಅನೇಕ ಸಾರ್ವಜನಿಕರು ಮತ್ತು ಫಲಾನುಭವಿಗಳು ನೋಂದಣಿ ಮಾಡಿಕೊಂಡು ಐದು ಗ್ಯಾರಂಟಿಗಳ ಬಳಕೆ ಅರ್ಹರಾದರು.
ಇದರಿಂದ ಪ್ರಯೋಜನ ಪಡೆದ ಹಲವು ಫಲಾನುಭವಿಗಳು ಅನಿಸಿಕೆ ಅಭಿಪ್ರಾಯ ಹೇಳಿದರು.
ಇದು ನಿಮಗಾಗಿ ತಂದಿರುವ ಯೋಜನೆಗಳನ್ನು ಇವುಗಳನ್ನು ಬಳಕೆ ಮಾಡಿಕೊಳ್ಳಿ ಎಂದು ಶಾಸಕ ಮಾನೆ ಎಲ್ಲರಿಗೂ ಮನವಿ ಮಾಡಿದರು.