ಪೀಣ್ಯ ದಾಸರಹಳ್ಳಿ:’ ಕೇಂದ್ರ ಸರ್ಕಾರ ಬಡವರ ಪರ ಸರ್ಕಾರ. ಇಡೀ ದೇಶದ 80 ಕೋಟಿ ಜನಕ್ಕೆ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡುತ್ತಿದೆ. ಭಾರತ್ ಅಕ್ಕಿಯನ್ನು ಕನಿಷ್ಠ 29 ರೂಪಾಯಿಗೆ ನೀಡಲಾಗುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಶಾಸಕ ಎಸ್. ಮುನಿರಾಜು ತಿಳಿಸಿದರು.
ಮಂಜುನಾಥ ನಗರದಲ್ಲಿ ಡಾಂಬರು ರಸ್ತೆ, ಗಣಪತಿ ನಗರ, ಸೋಮಶೆಟ್ಟಿಹಳ್ಳಿಯಲ್ಲಿ ಕಾಂಕ್ರೀಟ್ ರಸ್ತೆ ಒಂದು ಕೋಟಿ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸಿದ್ದರಾಮಯ್ಯ ಅವರು 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳುತ್ತಾರೆ ಆದರೆ ಅದರಲ್ಲಿ ಕೇಂದ್ರ ಸರ್ಕಾರದ 5 ಕೆ.ಜಿ, ಉಳಿದ 5 ಕೆ.ಜಿ.ಅಕ್ಕಿಯಲ್ಲಿ 2 ಕೆ.ಜಿ. ಅಕ್ಕಿ, 3 ಕೆ.ಜಿ. ರಾಗಿ ನೀಡುತ್ತಿದ್ದಾರೆ.
ಇದಲ್ಲದೆ ಕೇಂದ್ರ ಸರ್ಕಾರ ಭಾರತ್ ಅಕ್ಕಿಯನ್ನು ಬಡವರಿಗೆ ಕನಿಷ್ಠ ದರ 29 ರೂಗಗಳಿಗೆ ಮತ್ತು ಕಾಳುಗಳನ್ನು ಕನಿಷ್ಠ ದರದಲ್ಲಿ ನೀಡುತ್ತಿದೆ. ಬಜೆಟ್ ನಲ್ಲಿ 10 ವರ್ಷಗಳಲ್ಲಿ ನುಡಿದಂತೆ ನಡೆದಂತಹ ಸರ್ಕಾರ ಯಾವುದಾದರೂ ಇದ್ದರೆ ಅದು ನರೇಂದ್ರ ಮೋದಿ ನೇತೃತ್ವದ ಸರ್ಕಾರ’ ಎಂದರು.
ನುಡಿದಂತೆ ನಡೆದಿದ್ದೇವೆ ಎಂದು ಸಿದ್ದರಾಮಯ್ಯ ಸುಳ್ಳು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಯಾರು ನುಡಿದಂತೆ ನಡೆದಿದ್ದಾರೆ ಎಂದು ಈ ದೇಶದ ಜನತೆ ತೀರ್ಮಾನಿಸುತ್ತಾರೆ. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ಜನರು ಉತ್ತರಿಸುತ್ತಾರೆ’ ಎಂದರು.
ಕಾಂಗ್ರೆಸ್ಸಿನವರು ಅಖಂಡ ಭಾರತವನ್ನು ವಿಭಜನೆ ಮಾಡಿದವರು. ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾ ಇವೆಲ್ಲ ಹರಿದು ಹೋಗಿದೆ, ಅದಕ್ಕೂ ಮುಂಚೆ ಇದೆಲ್ಲ ಅಖಂಡ ಭಾರತ. ಹರಿದು ಹಂಚಿಹೊಗಿರುವುದರಿಂದ ಅವರಿಗೆ ಮತ್ತೆ ವಿಭಜನೆ ಮಾಡಬೇಕು ಎಂಬ ಆಸೆ. ದೇಶ ವಿಭಜನೆ ಕೆಲಸ ಯಾರಾದರೂ ಮಾಡಿದ್ದಾರೆ ಎಂದರೆ ಅದು ಕಾಂಗ್ರೆಸ್ಸಿನವರು’ ಎಂದರು.
ಇಂತಹ ಹೇಳಿಕೆಯನ್ನು ಡಿಕೆ ಸುರೇಶ್ ಬಾಯಲ್ಲಿ ಹೇಳಿಸುತ್ತಿದ್ದಾರೆ. ಅದನ್ನು ಖರ್ಗೆಯವರು ಕೂಡ ವಿರೋಧಿಸಿದ್ದಾರೆ. ಏನೇ ಆದರೂ ಈ ದೇಶದ ಜನತೆ ಮೋದಿ ಪರವಾಗಿ ಇದ್ದಾರೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.