ಕಲಬುರಗಿ: ಡಿ.ಕೆ.ಸು. ವಿರುದ್ದ ಗುಂಡಿಕ್ಕಿ ಕೊಲ್ಲೋ ಕಾನೂನು ತರಬೇಕು ಅನ್ನೋ ಈಶ್ವರಪ್ಪನವರು ರಾಮಾಯಣ ಹನುಮಾನ ಚಾಲಿಸಾ ಓದ್ಕೊಂಡು ಆರಾಮಾಗಿ ಮನೆಯಲ್ಲಿ ಇರಲಿ ಅಂತ ಸಚಿವ ಪ್ರಿಯಾಂಕ್ ಖರ್ಗೆ ಸಲಹೆ ಕೊಟ್ಟಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಪ್ರಿಯಾಂಕ್ ಖರ್ಗೆ ಅಂಥಹ ಕಾನೂನು ತಂದ್ರೆ ಬಿಜೆಪಿಯ ಅರ್ಧ ಖಾಲಿಯಾಗುತ್ತೆ ಅಂದ್ರು.
ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಈ ರೀತಿ ಹೇಳಿಕೆ ಕೊಡ್ತಾರೆ. ಒಟ್ಟಾರೆ ಅವರು ಬಿಜೆಪಿ ಪಕ್ಷದಲ್ಲಿ ಆಟಕ್ಕುಂಟು ಲೆಕ್ಕಕ್ಕಿಲ್ಲ ಅವರ ಪಕ್ಷದಲ್ಲೇ ಅವರಿಗೆ ಕಿಮ್ಮತ್ತಿಲ್ಲ ಅಂತ ಹೇಳಿದ್ರು. ಹೀಗಾಗಿ ಅವರಿಗೆ ನಿವೃತ್ತಿ ಕೊಡಿಸಿ ಮನೆಯಲ್ಲಿ ಕೂಡಿಸಿದ್ದಾರೆ..ಅದಕ್ಕಾಗಿ ಬೆಳಿಗ್ಗೆ ರಾಮಯಾಣ ಮಧ್ಯಾನ ಕೀರ್ತನೆ ಸಂಜೆ ಹನಮಾನ ಚಾಲೀಸ್ ಓದಲಿ ಅಂತ ವ್ಯಂಗ್ಯವಾಡಿದ್ರು.