ಚಿಕ್ಕೋಡಿ: ಹಿಡಕಲ ಗ್ರಾಮದಿಂದ ಖಣದಾಳ ಹಾಗೂ ಅಳಗವಾಡಿ ಗ್ರಾಮಕ್ಕೆ ತಲುಪುವ ರಸ್ತೆ ಕಾಮಗಾರಿಗೆ ಕುಡಚಿ ಶಾಸಕ ಮಹೇಂದ್ರ ತಮ್ಮಣ್ಣವರ ಅವರಿಂದ ಗುದ್ದಲಿ ಪೂಜೆ ನೇರವೇರಿಸಲಾಯಿತು.
ಸುಮಾರು 2 ಕೋಟಿ ರೂಪಾಯಿ ವೆಚ್ಚ ದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಗಳ ಸುಧಾರಣೆಗಾಗಿ ಚಾಲನೆ ದೊರತಿದ್ದು, ರಸ್ತೆಗಳು ಉತ್ತಮ ಗುಣಮಟ್ಟ ಹೊಂದಬೇಕು ಎಂದು ಗುತ್ತಿಗೆದಾರರಿಗೆ ಶಾಸಕ ಸೂಚನೆ ನೀಡಿದರು.