ಬೆಂಗಳೂರು: ಜೈಲಿಗೆ ಹೋಗಿ ಬಂದ ಆರೋಪಿ ವರ್ತೂರ್ ಸಂತೋಷ್ ಗೆ ಪೊಲೀಸರಿಂದ ಸನ್ಮಾನ ಮಾಡಿದ್ದು ಈ ಭಾರೀ ಎಲ್ಲೆಡೆ ವೈರಲ್ ಆಗಿದ್ದು ನೈತಿಕ ಗಿರಿ ಕಳೆದುಕೊಳ್ಳುತ್ತಿದ್ದಾರ ವರ್ತೂರು ಪೊಲೀಸರು ಎಂಬ ಪ್ರಶ್ನೆ ಎಲ್ಲರನ್ನ ಕಾಡುತ್ತಿದೆ.
ವ್ಯಕ್ತಿ ಪೂಜೆಗೆ ಮುಂದಾದ್ರಾ ವರ್ತೂರು ಪೊಲೀಸರು ಸಬ್ ಇನ್ಸ್ ಪೆಕ್ಟ್ ನಿಂದ ವರ್ತೂರು ಸಂತೋಷ್ ಗೆ ವರ್ತೂರು ಪೊಲೀಸ್ ಠಾಣೆಯ ಎಸ್ಐ ತಿಮ್ಮರಾಯಪ್ಪನಿಂದ ಸನ್ಮಾನಬಾರಿ ಚರ್ಚೆಗೆ ಸಾಕ್ಷಿಯಾಗುತ್ತಿದೆ ಸನ್ಮಾನದ ವಿಡಿಯೋ ಖುದ್ದು ವರ್ತೂರು ಸಂತೋಷ್ ಇರುವ ಜಾಗಕ್ಕೆ ತೆರಳಿ ತಿಮ್ಮರಾಯಪ್ಪರಿಂದ ಸನ್ಮಾನ..
ಇತ್ತೀಚಿಗೆ ಕೆಲ ತಿಂಗಳ ಹಿಂದೆ ಜೈಲಿಗೆ ಹೋಗಿ ಬಂದಿದ್ದ ವರ್ತೂರು ಸಂತೋಷ್ ಈ ಎಲ್ಲಾ ವಿಚಾರ ಗೊತ್ತಿದ್ದರು ಸಹ ಸನ್ಮಾನ ಮಾಡಿರುವ ಪೊಲೀಸರು ಯೂನಿಫಾರ್ಮ್ ನಲ್ಲಿಯೇ ಎಸ್.ಐ ನಿಂದ ಸನ್ಮಾನ. ಸಬ್ ಇನ್ಸ್ ಪೆಕ್ಟರ್ ಸೇರಿ ಇನ್ನುಳಿದಂತೆ ಕೆಲ ಕ್ರೈಂ ಸ್ಟ್ಯಾಫ್ ಗಳು ಸಹ ಭಾಗಿಯಾಗಿದ್ದರು.
ಪೊಲೀಸರೇ ಹೋಗಿ ಸನ್ಮಾನ ಮಾಡುವಂತದೇನಿತ್ತು ಎಂದು ಬಾರಿ ಆಕ್ರೋಶ ವ್ಯಕ್ತವಾಗಿದ್ದು ವರ್ತೂರು ಪೊಲೀಸರ ಈ ನಡೆಗೆ ಬಾರಿ ವಿರೋಧ ಉಂಟಾಗಿದ್ದು ಮೇಲಿನ ಅಧಿಕಾರಿಗಳು ಇದರ ಬಗ್ಗೆ ಏನು ಕ್ರಮ ಕೈಗೊಳ್ಳುತ್ತಾರೆ ನೋಡಬೇಕಿದೆ.