ಬೆಂಗಳೂರು: ಕಾಂಗ್ರೆಸ್ ಮನೆಯಲ್ಲಿ ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ಶುರುವಾಗಿದೆ.ಸಚಿವರು ಪ್ರತ್ಯೇಕವಾಗಿ ಸಭೆ ಮಾಡೋದು ಬೇಡ ಎಂದು ಎಐಸಿಸಿ ಸೂಚನೆ ನೀಡಿದ್ದರೂ,ಕೆಲ ಸಚಿವರು ಡೋಂಟ್ ಕ್ಯಾರ್ ಎಂದಿದ್ದಾರೆ.
ಸಚಿವ ಕೆ ಎಚ್ ಮುನಿಯಪ್ಪ ನಿವಾಸದಲ್ಲಿ ಇಂದು ಅಹಿಂದ ಸಚಿವರು ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ,ಮುಂಬರುವ ಪರಿಷತ್ ಹಾಗು ರಾಜ್ಯಸಭಾ ಚುನಾವಣೆಯಲ್ಲಿ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಸರ್ಕಸ್ ನಡೆಸಿದ್ದಾರೆ.
ಯೆಸ್, ಹೆಚ್ಚುವರಿ ಡಿಸಿಎಂಗಾಗಿ ಕಾಂಗ್ರೆಸ್ ಸರ್ಕಾರದಲ್ಲಿ ಶುರುವಾಗಿದ್ದ ಅಹಿಂದ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಗಳಿಗೆ ಹೈಕಮಾಂಡ್ ಬ್ರೇಕ್ ಹಾಕಿತ್ತು.ಪದೇ ಪದೇ ಈ ರೀತಿ ಸಭೆ ಮಾಡಿದ್ರೆ, ಪಕ್ಷಕ್ಕೆ ಡ್ಯಾಮೇಜ್ ಆಗುತ್ತೆ.ಇನ್ಮುಂದೆ ಯಾರು ಈ ರೀತಿ ಮೀಟಿಂಗ್ ಮಾಡಬೇಡಿ ಎಂದು ಎಐಸಿಸಿ ನಾಯಕರು ಸೂಚನೆ ನೀಡಿದ್ದರು.ಆದ್ರೆ ಮತ್ತೆ ಇವತ್ತು ಆಹಾರ ಸಚಿವ ಕೆ ಎಚ್ ಮುನಿಯಪ್ಪ ನಿವಾಸದಲ್ಲಿ ಅಹಿಂದ ಸಚಿವರು ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸಿ,ಮತ್ತೆ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
ಇನ್ನು ಜಗದೀಶ್ ಶೆಟ್ಟರ್ ಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿರೋದ್ರಿಂದ ಒಂದು ಸ್ಥಾನ ತೆರವಾಗಿದೆ.ಹೀಗಾಗಿ, ಗೃಹ ಸಚಿವ ಜಿ.ಪರಮೇಶ್ವರ್ ಅತ್ಯಾಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಎಂ ಸಿ ವೇಣುಗೋಪಾಲ ಗೆ ಟಿಕೆಟ್ ಕೊಡಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ.ಇನ್ನು ಘೋಷಣೆಯಾಗಿರುವ ಲೋಕಸಭೆ ಚುನಾವಣೆಯಲ್ಲೂ ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಅಹಿಂದ ಸಚಿವರು ಸರ್ಕಸ್ ನಡೆಸಿದ್ದಾರೆ.ಕಾಂಗ್ರೆಸ್ ಸರ್ಕಾರ ಬರಲು ಕಾರಣವಾಗಿರುವ ಅಹಿಂದ ಸಮುದಾಯಕ್ಕೆ ಮಣೆ ಹಾಕಬೇಕೆಂದು ಒತ್ತಡ ತರಲು ಸಭೆ ನಡೆಸಲಾಗಿದೆ.
ಒಟ್ಟಾರೆ, ಅಹಿಂದ ಸಚಿವರು ಮತ್ತೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆಸುವ ಮೂಲಕ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದು,ತಮ್ಮ ಬೆಂಬಲಿಗರಿಗೆ ಟಿಕೆಟ್ ಕೊಡಿಸಲು ಮುಂದಾಗಿದ್ದಾರೆ.ಇದು ಎಷ್ಟರ ಮಟ್ಟಿಗೆ ಸರ್ಕಸ್ ಆಗುತ್ತೆ ಅನ್ನೋದನ್ನ ಕಾದು ನೋಡಬೇಕಿದೆ.