ದೆಹಲಿ:- ರಾಹುಲ್ ಗಾಂಧಿ ನಿಜವಾಗಿಯೂ ಅಜ್ಞಾನಿಯೋ ಅಥವಾ ಸುಳ್ಳುಗಾರನೋ ಎಂದು ಧರ್ಮೇಂದ್ರ ಪ್ರಧಾನ್ ಪ್ರಶ್ನೆ ಮಾಡಿದ್ದಾರೆ.
ರಾಹುಲ್ ಗಾಂಧಿ ಜೀ ಅವರು ಮೊದಲು ಸ್ವಂತವಾಗಿ ನ್ಯಾಯ ಒದಗಿಸಿಕೊಳ್ಳಬೇಕು, ಅವರು ಪ್ರತಿದಿನ ಸುಳ್ಳನ್ನು ಹಬ್ಬಿಸಿ ಮಾರಾಟ ಮಾಡಿದರೆ ಕೇವಲ ಹಾಸ್ಯ, ವಿಡಂಬನೆ ಮತ್ತು ಮನರಂಜನೆಗೆ ಸೀಮಿತವಾಗುವ ದಿನ ದೂರವಿಲ್ಲ ಎಂದರು.
ಸತ್ಯ ಏನೆಂದು ಇಲ್ಲಿ ಕೇಳಿ, ನರೇಂದ್ರ ಮೋದಿ ಹುಟ್ಟಿದಾಗಿನಿಂದ ಒಬಿಸಿ ಅಲ್ಲ, ಅವರನ್ನು ಗುಜರಾತ್ ಸರ್ಕಾರ ಒಬಿಸಿ ಮಾಡಿದೆ. ಅಂಥವರು ಹಿಂದುಳಿದವರ ಹಕ್ಕು ಮತ್ತು ನ್ಯಾಯಕ್ಕಾಗಿ ಸಾಥ್ ನೀಡಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್, ಪ್ರಧಾನಿ ಮೋದಿಯವರ ಜಾತಿ ಬಗ್ಗೆ ಹೇಳಿರುವ ವಿಡಿಯೊವನ್ನು ಶೇರ್ ಮಾಡಿ ಪ್ರಧಾನ್ ಈ ರೀತಿ ಟ್ವೀಟ್ ಮಾಡಿದ್ದಾರೆ.