ನವದೆಹಲಿ:– 10 ವರ್ಷಗಳ ಯುಪಿಎ, 10 ವರ್ಷಗಳ ಎನ್ಡಿಎ ಸರ್ಕಾರದ ಆಡಳಿತದ ಅವಧಿ ಶ್ವೇತಪತ್ರವನ್ನು ಕೇಂದ್ರ ಸಚಿವೆ ನಿರ್ಮಾಲಾ ಸೀತಾರಾಮನ್ ಹೊರಡಿಸಿದ್ದಾರೆ.
2014 ರಲ್ಲಿ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗ, ಆರ್ಥಿಕತೆಯು ಕೆಟ್ಟ ಸ್ಥಿತಿಯಲ್ಲಿತ್ತು. ಒಂದು ದಶಕದ ತಪ್ಪು ನಿರ್ವಹಣೆಯ ಆರ್ಥಿಕತೆಯನ್ನು ಸರಿಪಡಿಸುವ ಪ್ರಯತ್ನ ಮಾಡಿದ್ದೇವೆ. ಈಗ ಭಾರತ ‘ಟಾಪ್ ಫೈವ್’ ಆರ್ಥಿಕತೆಗಳಲ್ಲಿ ಒಂದಾಗಿದ್ದೇವೆ. ಪ್ರತಿ ವರ್ಷ ಜಾಗತಿಕ ಬೆಳವಣಿಗೆಗೆ ಮೂರನೇ ಅತಿದೊಡ್ಡ ಕೊಡುಗೆಯನ್ನು ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ
ಯುಪಿಎ ಅವಧಿಯಲ್ಲಿ ಜಗತ್ತು ಭಾರತದ ಆರ್ಥಿಕ ಸಾಮರ್ಥ್ಯ ಮತ್ತು ಕ್ರಿಯಾಶೀಲತೆಯ ಮೇಲೆ ವಿಶ್ವಾಸ ಕಳೆದುಕೊಂಡಿತ್ತು. ಈಗಿನ ಆರ್ಥಿಕ ಸ್ಥಿರತೆ ಮತ್ತು ಬೆಳವಣಿಗೆಯ ನಿರೀಕ್ಷೆ ಹೊಂದಿದೆ. ಯುಪಿಎ ಆಡಳಿತ ಅವಧಿ ಹಗರಣಗಳಿಂದ ತುಂಬಿತ್ತು. ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಹಗರಣ ಮಾಡಲಾಗಿತ್ತು ಎಂದು ಆರೋಪಿಸಿದ್ದಾರೆ.
ನಾವು 2023 ರಲ್ಲಿ ಅತ್ಯಂತ ದೊಡ್ಡ ಮತ್ತು ವರ್ಷಾವಧಿಯ G20 ಶೃಂಗಸಭೆಯನ್ನು ಯಶಸ್ವಿಯಾಗಿ ಆಯೋಜಿಸಿದ್ದೇವೆ. ಜಾಗತಿಕ ಸಮಸ್ಯೆಗಳಿಗೆ ಭಾರತ ಪರಿಹಾರಗಳನ್ನು ಒದಗಿಸಿದೆ. ಲಾಜಿಸ್ಟಿಕ್ಸ್ ವಿಷಯದಲ್ಲಿ ಭಾರತವು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯುಪಿಎ 2G ಹಗರಣವನ್ನು ನೋಡಿದ್ದೇವೆ. ನಾವು 4G ಅಡಿಯಲ್ಲಿ ಜನಸಂಖ್ಯೆಯ ವ್ಯಾಪಕ ವ್ಯಾಪ್ತಿಯನ್ನು ಹೊಂದಿದ್ದೇವೆ. 2023 ರಲ್ಲಿ ವಿಶ್ವದ ಅತ್ಯಂತ ವೇಗವಾಗಿ 5G ರೋಲ್ಔಟ್ ಅನ್ನು ಕಡಿಮೆ ದರಗಳೊಂದಿಗೆ ಹೊಂದಿದ್ದೇವೆ ಎಂದು ಹೇಳಿದ್ದಾರೆ.
ಯುಪಿಎ ಅವಧಿಯಲ್ಲಿ ಕಲ್ಲಿದ್ದಲು ಹಗರಣವಾಗಿದೆ. ಈಗ ಆರ್ಥಿಕತೆ ಮತ್ತು ಸಾರ್ವಜನಿಕ ಹಣಕಾಸುಗಳನ್ನು ಹೆಚ್ಚಿಸಲು ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿಕೊಳ್ಳಲು ನಾವು ಪಾರದರ್ಶಕ ಮತ್ತು ವಸ್ತುನಿಷ್ಠ ಹರಾಜು ವ್ಯವಸ್ಥೆಯನ್ನು ರಚಿಸಿದ್ದೇವೆ. ಯುಪಿಎ ಅವಧಿಯಲ್ಲಿ ಸರ್ಕಾರವು ಆಯ್ದ ಕೆಲವರಿಗೆ ಚಿನ್ನದ ಆಮದು ಪರವಾನಗಿಗಳನ್ನು ನೀಡಿತು. ಈಗ ನಾವು ಗಿಫ್ಟ್ ಐಎಫ್ಎಸ್ಸಿಗೆ ಆಮದು ಮಾಡಿಕೊಳ್ಳಲು ಪಾರದರ್ಶಕ ಕಾರ್ಯವಿಧಾನದೊಂದಿಗೆ ವಿನಿಮಯವನ್ನು ಸ್ಥಾಪಿಸಿದ್ದೇವೆ ಎಂದಿದ್ದಾರೆ.
ಆಗ ನಮ್ಮ ಆರ್ಥಿಕತೆಯು ‘ಡ್ಯುಯಲ್ ಬ್ಯಾಲೆನ್ಸ್ ಶೀಟ್ ಸಮಸ್ಯೆಯನ್ನು’ ಎದುರಿಸುತ್ತಿತ್ತು. ನಮ್ಮ ಸರ್ಕಾರದಲ್ಲಿ ಆರ್ಥಿಕತೆ ಮತ್ತು ಕಂಪನಿಗಳು ಹಾಗೂ ಬ್ಯಾಂಕಿಂಗ್ ವಲಯವನ್ನು ‘ಡ್ಯುಯಲ್ ಬ್ಯಾಲೆನ್ಸ್ ಶೀಟ್ನಿಂದ ಲಾಭ’ಕ್ಕೆ ತಿರುಗಿಸಿದ್ದೇವೆ. ಇದು ಹೂಡಿಕೆ ಮತ್ತು ಉದ್ಯೋಗವನ್ನು ಸೃಷ್ಟಿಸಲು ಗಣನೀಯ ಸಾಮರ್ಥ್ಯವನ್ನು ಹೊಂದಿದೆ ಎಂದು ಸಮರ್ಥಿಸಿಕೊಂಡಿದ್ದಾರೆ
ಯುಪಿಎ ಅವಧಿಯಲ್ಲಿ ದೇಶದಲ್ಲಿ ಹಣದುಬ್ಬರ ದರ ಎರಡಂಕಿಯಲ್ಲಿತ್ತು. ಈಗ ಹಣದುಬ್ಬರವನ್ನು ಶೇ.5 ಕ್ಕೆ ಇಳಿಸಲಾಗಿದೆ. ಯುಪಿಎ ಅವಧಿಯಲ್ಲಿ ವಿದೇಶಿ ವಿನಿಮಯ ಬಿಕ್ಕಟ್ಟನ್ನು ಹೊಂದಿದ್ದೆವು. ಈಗ ನಾವು US $ 620 ಶತಕೋಟಿಗಿಂತ ಹೆಚ್ಚಿನ ವಿದೇಶಿ ವಿನಿಮಯ ಸಂಗ್ರಹವನ್ನು ಹೊಂದಿದ್ದೇವೆ. ಯುಪಿಎ ಅವಧಿಯಲ್ಲಿ ಮೂಲಸೌಕರ್ಯವು ಆದ್ಯತೆಯಾಗಿರಲಿಲ್ಲ. ಈಗ ‘ಹೂಡಿಕೆ, ಬೆಳವಣಿಗೆ, ಉದ್ಯೋಗ, ಉದ್ಯಮಶೀಲತೆ, ಉಳಿತಾಯ ಮತ್ತು ಹೆಚ್ಚಿನ ಹೂಡಿಕೆ ಮಾಡಿ ವೇಗವಾಗಿ ಅಭಿವೃದ್ದಿ ಹೊಂದುತ್ತಿದ್ದೇವೆ ಎಂದು ಶ್ವೇತಪತ್ರದಲ್ಲಿ ಹೇಳಿಕೊಂಡಿದ್ದಾರೆ.