ಗದಗ: ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಜಿಗೇರಿ ಗ್ರಾಮದ ಹೊರವಲಯದಲ್ಲಿ ಮರಿಗಳೊಂದಿಗೆ ಚಿರತೆ ಅವಿತು ಕುಳಿತಿರುವ ಸಂಬಂಧ ಅರಣ್ಯ ಇಲಾಖೆಯಿಂದ ಆಪರೇಷನ್ ಚಿರತೆ ಆರಂಭವಾಗಿದೆ. ನಿನ್ನೆ 18 ವರ್ಷದ ಉದಯ ಎಂಬ ಯುವಕನ ಮೇಲೆ ದಾಳಿ ಮಾಡಿತ್ತು.
ನಂತರ ಎರಡು ಮರಿಗಳೊಂದಿಗೆ ಬಾಳೆ ತೋಟದಲ್ಲಿ ಠಿಕಾಣಿ ಹೂಡಿದೆ. ಕಾರ್ಯಾಚರಣೆ ವೇಳೆಯೂ ಮುದಕಪ್ಪ ಎಂಬಾತನ ಮೇಲೆ ದಾಳಿ ಮಾಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಅಲರ್ಟ್ ಆಗಿದ್ದು, ಜೆಸಿಬಿ ಮೂಲಕ ಬಾಳೆ ತೋಟಕ್ಕೆ ಎಂಟ್ರಿಯಾಗಿ ಕಾರ್ಯಾಚರಣೆಗೆ ಸಜ್ಜು ಆಗಿದೆ.