ಬೆಂಗಳೂರು: ಅನಧಿಕೃತ ಶಾಲೆಗಳನ್ನ ಮುಚ್ಚುವಂತೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದ್ದು ಈಗ ಶಿಕ್ಷಣ ಇಲಾಖೆಯ ಸುತ್ತೊಲೆಯ ಬಗ್ಗೆ ಪರ-ವಿರೋಧದ ಚರ್ಚೆ ಶುರುವಾಗಿದೆ.2024-25ನೇ ಶೈಕ್ಷಣಿಕ ವರ್ಷದ ಶಾಲಾ ಪ್ರವೇಶಾತಿಗೆ ತಯಾರಿಗಳು ನಡೆಯುತ್ತಿವೆ.ಆದರೆ ಇದೀಗ ಯಾವ ಶಾಲೆಗೆ ಸೇರಿಸಬೇಕೆಂದು ಪೋಷಕರು ಕಂಫ್ಯೂಸ್ ಆಗಿದ್ದಾರೆ.. ಅದ್ಯಾಕೆ ಅಂತೀರಾ ಈ ಸ್ಟೋರಿ ನೋಡಿ..
ರಾಜ್ಯದಲ್ಲಿ 1,600 ಅಕ್ರಮ ಶಾಲೆಗಳಿವೆ ಎಂದು ಕಳೆದ ವರ್ಷ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಬಹಿರಂಗಪಡಿಸಿದ್ದರು. ಇಂತಹ ಅಕ್ರಮ ಶಾಲೆಗಳನ್ನು ಹಂತ ಹಂತವಾಗಿ ಮುಚ್ಚಿ ವಿದ್ಯಾರ್ಥಿಗಳನ್ನು ಬೇರೆ ಶಾಲೆಗಳಿಗೆ ಸ್ಥಳಾಂತರಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು. ಆದರೆ ಆದೇಶ ಹೊರಡಿಸಿದ್ದ ಷ್ಟೇ ಅದ್ಯಾವುದೂ ಕೂಡ ಜಾರಿಯಾಗಲಿಲ್ಲ.
ಇತ್ತೀಚಿನ ಸುತ್ತೋಲೆಯನ್ನು ಟೀಕಿಸಿದ ಕರ್ನಾಟಕದ ಆಂಗ್ಲ ಮಾಧ್ಯಮ ಶಾಲೆಗಳ ಅಸೋಸಿಯೇಟೆಡ್ ಮ್ಯಾನೇಜ್ಮೆಂಟ್ಸ್ ಇಲಾಖೆಯು ತನ್ನ ಆದೇಶಗಳ ಬಗ್ಗೆ ಯಾವುದೇ ಸ್ಪಷ್ಟತೆಯನ್ನು ಹೊಂದಿಲ್ಲ ಮತ್ತು ಇದು ಶಾಲೆಗಳು ಮತ್ತು ಪೋಷಕರಲ್ಲಿ ಭಯ ಮತ್ತು ಗೊಂದಲವನ್ನು ಮಾತ್ರ ಸೃಷ್ಟಿಸುತ್ತಿದೆ ಎಂದು ಆರೋಪಿಸಿದೆ. ಅಂತೆಯೇ ಈ ಸುತ್ತೋಲೆಯಿಂದ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುವ ಸಾಧ್ಯತೆ ಇದೆ ಎಂದು ಆಕ್ರೋಶ ಹೊರ ಹಾಕುತ್ತಿದ್ದಾರೆ..
ಸರ್ಕಾರದ ಅನುಮತಿ ಇಲ್ಲದಿದ್ರು ಸಾವಿರಾರು ಖಾಸಗಿ ಶಾಲೆಗಳು ನಡೆಯುತ್ತಿದೆ..ಪೋಷಕರು ಸರ್ಕಾರ ಶಾಲೆ ವಿವರಕೊಡಿ ಸಾಕು ನಾವೇ ಆ ಶಾಲೆಗಳಿಗೆ ಬುದ್ಧಿ ಕಲಿಸುತ್ತೇವೆ ಎಂದು ಆಕ್ರೋಶಹೊರಹಾಕುತ್ತಿದ್ದಾರೆ… ಆದ್ರೆ ಆ ಶಾಲೆಗಳ ಮೇಲೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ..ತಮ್ಮ ಮಕ್ಕಳನ್ನ ಶಾಲೆಗೆ ಸೇರಿಸುವ ಮುನ್ನ ಶಾಲೆಯ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು..ಅದಷ್ಟು ಬೇಗ ಸರ್ಕಾರ ಈ ಸಾಲಿನ ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಲುತ್ತಿದ್ದಾರೆ..
ಒಟ್ಟಾರೆ ಅನಧಿಕೃತ ಶಾಲೆಗಳ ನಿರ್ವಹಣೆಯಿಂದ ಮಕ್ಕಳು ಬಲಿಯಾಗುತ್ತಿದ್ದಾರೆ ..ಪೋಷಕರು ಆತಂಕದಲ್ಲಿ ಯಾವ ಶಾಲೆಗೆ ಸೇರಿಸಬೇಕು ಅಂತ ಕನ್ಫ್ಯೂಸ್ ಆಗಿದ್ದಾರೆ..ಇದಕ್ಕೆ ಪರಿಹಾರ ಸರ್ಕಾರವೇ ನೀಡಬೇಕಿದೆ .. ಮುಂದಾದರು ಸರ್ಕಾರ ಎಚ್ಚೆತ್ತುಕೊಂಡು ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತದಾ ಎಂದು ಕಾದು ನೋಡಬೇಕಿದೆ.