ತುಮಕೂರು: ನಗರದಿಂದ ಅಯೋಧ್ಯೆಗೆ (Ayodhya) ವಿಶೇಷ ರೈಲು ಇಂದು ಬೆಳಗಿನ ಜಾವ 5:50ಕ್ಕೆ ಹೊರಟಿದೆ.
ನಗರದಲ್ಲಿ ಇಂದು ತುಮಕೂರು to ಅಯೋಧ್ಯೆ ಎಂಬ ನಾಮಫಲಕ ಹೊತ್ತ ರೈಲು (Train ) ಅಯೋಧ್ಯೆಗೆ ಹೊರಟಿದೆ. ಈ ರೈಲಿನಲ್ಲಿ ತುಮಕೂರಿನಿಂದ ಸುಮಾರು 250 ರಾಮಭಕ್ತರು ಅಯೋಧ್ಯೆಗೆ ಪ್ರಯಾಣಿಸುತ್ತಿದ್ದಾರೆ.
ರೈಲ್ವೆ ನಿಲ್ದಾಣದಲ್ಲಿ ಹಿಂದೂ ಕಾರ್ಯಕರ್ತರು (Hindu Activists) ರಾಮಲಲ್ಲಾಗೆ ಪೂಜೆ ಮಾಡಿ, ಭಜನೆ ಹಾಡಿ, ಯಾತ್ರೆಗೆ ಹೊರಟ ರಾಮಭಕ್ತರಿಗೆ ಆರತಿ ಬೆಳಗಿಸಿ ಬೀಳ್ಕೊಟ್ಟಿದ್ದಾರೆ. ಫೆ.9ರಂದು ಈ ರೈಲು ಅಯೋಧ್ಯೆಗೆ ತಲುಪಲಿದೆ.