ಕೋಲಾರ:- ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರಬೇಕಾದ ಅನುಧಾನಕ್ಕೆ ಸಂಬಂದಿಸಿದಂತೆ ಕಾಂಗ್ರೇಸ್ ಪಕ್ಷದಿಂದ ರಾಜ್ಯದ ಎಲ್ಲಾ ಶಾಸಕರು ಸಂಸದರು ಸೇರಿ ದೆಹಲಿಯಲ್ಲಿ ಧರಣಿ ಸತ್ಯಾಗ್ರಹ ಮಾಡಲಾಗುವುದು ಎಂದು ಕೋಲಾರ ಶಾಸಕರಾದ ಡಾ ಜಿ ಕೊತ್ತೂರು ಮಂಜುನಾಥ್ ಅವ್ರು ಹೇಳಿದ್ರು.
ಇಂದು ನಗರದ. ತಾಲೂಕು ಪಂಚಾಯಿತಿ ಸಭಾಂಗಣದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರಾರೊಂದಿಗೆ ಮಾತನಾಡಿದ್ರು, ದೇಶದ ಪ್ರಧಾನ ಮಂತ್ರಿಗಳಿಗೆ ಎಲ್ಲಾ ರಾಜ್ಯದ ಮುಖ್ಯಮಂತ್ರಿಗಳು ಮಕ್ಕಳು ಇದ್ದಂತೆ ಎಲ್ಲರನ್ನೂ ಒಂದೇ ತರ ನೋಡಬೇಕು ಸರಿಯಾಗಿ ಪಾಲು ನೀಡಬೇಕು ಅನ್ನೋ ನಿಯಮವೇ ಇದೆ ದೇಶದಲ್ಲಿ ಅತಿ ಹೆಚ್ಚಿನ ತೆರಿಗೆ ಪಾವತಿಸುವಲ್ಲಿ ನಮ್ಮ ರಾಜ್ಯ ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ ನಮಗೆ ಹೆಚ್ಚಿನ ಅನುದಾನ ಕೊಡಿ ಅಂತ ಕೇಳುತ್ತಿಲ್ಲ, ನಮ್ಮ ರಾಜ್ಯಕ್ಕೆ ಬರಬೇಕಾಗಿರುವ ಅನುದಾನವನ್ನು ಮಾತ್ರ ನಾವು ಕೇಳುತ್ತಿದ್ದೇವೆ, ಆದರೆ ಪ್ರಧಾನ ಮಂತ್ರಿಗಳು ಎಲ್ಲರಿಗೂ ಒಂದೇ ರೀತಿ ನೀಡದೇ ಒಂದೊಂದು ರಾಜ್ಯಕ್ಕೆ ಒಂಧೊಂದು ರೀತಿಯಲ್ಲಿ ತೆರೆಗಿಯನ್ನು ನೀಡುತ್ತಿದ್ದಾರೆ
ರಾಜ್ಯದಿಂದ ಕೇಂದ್ರಕ್ಕೆ ಹೋಗುವ ತೆರಿಗೆಯಲ್ಲಿ ನಮ್ಮ ರಾಜ್ಯಕ್ಕೆ ನೀಡಬೇಕಾದ ಪಾಲನ್ನು ಕೇಳಲು ಹೋಗುತ್ತಿದ್ದೇವೆ ಎಂದು ತಿಳಿಸಿದರು. ಡಿಸಿಸಿ ಬ್ಯಾಂಕ್ ಮುಳುಹೋಗುತ್ತಿದೆ ಅಂದರೆ ಅದಕ್ಕೆ ಅಲ್ಲಿನ ನಿರ್ದೆಶಕರು, ಅಧ್ಯಕ್ಷರು ಕಾರಣ, ಏನೇ ಸಮಸ್ಯೆ ಆದ್ರೂ ಅವರೇ ನೇರ ಹೊಣೆ ಡಿಸಿಸಿ ಬ್ಯಾಂಕ್ ವಿಚಾರಕ್ಕೆ ನಾನು ಹೋಗುವುದಿಲ್ಲ ಮಾತನಾಡುವುದು ಇಲ್ಲ, ಸರ್ಕಾರದ ನಿಮಯದ ಪ್ರಕಾಣ ಚುನಾವಣೆ ನಡೆದಿಲ್ಲ, ಸಹಕಾರ ಕಾಯ್ದೆ ೩೦ ಡಿ ಪ್ರಕಾರ ೧೯೫ ದಿನ ನೋಟೀಸ್ ನೀಡಬೇಕು ಅದನ್ನು ಇನ್ನು ನೀಡಿಲ್ಲ ಅವರೇ ನ್ಯಾಯಾಲಯಕ್ಕೆ ಹೊಗಿದ್ದಾರೆ ಅಲ್ಲಿ ಏನೇನು ತಿರ್ಮಾನ ಹಾಗಿದೆ ಎಲ್ಲರಿಗೂ ಗೊತ್ತಿರುವ ವಿಚಾರ, ಚುನಾವಣೆ ಮಾಡಿದಾಗ ಹೊಸ ಆಡಳಿತ ಬಂದಾಗ ಅದರ ಬಗ್ಗೆ ಅವರು ತೆಗೆದುಕೊಳ್ಳುತ್ತಾರೆ ಎಂದರು.