ಮುಂಬೈ:- ಬೀಗ ಹಾಕಿದ ಮನೆಯಲ್ಲಿ ಮೂರು ಕೊಳೆತ ದೇಹಗಳು ಪತ್ತೆಯಾದ ಘಟನೆ ಇಲ್ಲಿನ ವಸಾಯಿ ಬಳಿ ಜರುಗಿದೆ. ಹಣ್ಣು ಮಾರಾಟ ಮಾಡುತ್ತಿದ್ದ ಮೋ ಅಜಮ್, ರಾಜು ಮತ್ತು ಛೋಟ್ಕು ಎಂದು ಗುರುತಿಸಲಾಗಿದೆ.
ಬೀಗ ಹಾಕಿದ ಮನೆಯಿಂದ ಕೆಟ್ಟ ವಾಸನೆ ಬರುತ್ತಿದ್ದನ್ನು ಗಮನಿಸಿದ ಅಲ್ಲಿನ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರಿಶೀಲಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದೆ. ಈ ಮೂವರ ಸಾವಿಗೆ ಆಮ್ಲಜನಕ ಕೊರತೆಯಾಗಿರಬೇಕು ಅಥವಾ ಯಾರಾದರೂ ವಿಷಕಾರಕ ಅನಿಲವನ್ನು ಬಿಟ್ಟಿರಬಹುದು ಎಂದು ಆರಂಭಿಕ ತನಿಖೆಯಲ್ಲಿ ತಿಳಿದುಬಂದಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ತನಿಖೆ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ