ಬೆಂಗಳೂರು: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಮಾಜಿ ಸಚಿವ ಸುಧಾಕರ್ ಸ್ಪರ್ಧೆ ವಿಚಾರ ಬಗ್ಗೆ ಯಲಹಂಕ ಶಾಸಕ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಮಗ ಅಲೋಕ್ಗೂ ಲೋಕಸಭೆ ಟಿಕೆಟ್ ಬಯಸಿರುವ ಶಾಸಕ ವಿಶ್ವನಾಥ್
ನಿನ್ನೆ ನಮ್ಮ ಪಕ್ಷದ, ಮಾಜಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದಾರೆ. ನಾನು ಮಾಧ್ಯಮದ ಮೂಲಕ ನೋಡಿದೆ. ಜೆಡಿಎಸ್ ವರಿಷ್ಠರಾದ ದೇವೇಗೌಡರು ಹಾಗೂ ಕುಮಾರಸ್ವಾಮಿ ಹೇಳಿದ್ದಾರೆ. ಅದಕ್ಕಾಗಿ ದೇವಮೂಲೆಯಿಂದ ಪೂಜೆ ಆರಂಭಿಸಿ ಪ್ರಚಾರ ಮಾಡ್ತಿದ್ದೀನಿ ಅಂತ.
ಈವರೆಗೂ ಬಿಜೆಪಿ ಇಂದ ಯಾವುದೇ ಅಭ್ಯರ್ಥಿ ಹೆಸರು ಅಧಿಕೃತವಾಗಿ ಘೋಷಣೆ ಮಾಡಿಲ್ಲ. ನಮ್ಮ ರಾಷ್ಟ್ರೀಯ ಪಾರ್ಲಿಮೆಂಟರಿ ಬೋರ್ಡಲ್ಲಿ ನಿರ್ಧಾರ ಆಗಲಿದೆ. ಸುಧಾಕರ್ ಅವರು ಕಾಂಗ್ರೆಸ್ ಇಂದ ಹೊಸದಾಗಿ ಬಂದಿರೋದ್ರಿಂದ ಅವರಿಗೆ ತಿಳಿದಿಲ್ಲ. ನಮ್ಮ ಕೆಲ ಸಿಸ್ಟಮ್ ತಿಳಿದುಕೊಳ್ಳಬೇಕಿದೆ. ಯಾವುದೇ ಸಣ್ಣ ಚುನಾವಣೆ ಆದ್ರೂ ಹೈಕಮಾಂಡ್ ನಿರ್ಧಾರ ಮಾಡಬೇಕು.
ನನ್ನ ಮಗ ಅಲೋಕ್ ಕೂಡ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಆಕಾಂಕ್ಷಿನಾನೇ ಅಭ್ಯರ್ಥಿ ಅಂತ ಹೇಳಿಲ್ಲ.
ವರಿಷ್ಠರ ತೀರ್ಮಾನ ಅಂತ ಹೇಳಲಾಗಿದೆ ಯಾರಿಗೇ ಕೊಟ್ರು ಕೆಲಸ ಮಾಡಿ, ಗೆಲ್ಲಿಸೋಣ ಅಂತ ಹೇಳಿದ್ದೇವೆ ಕ್ಷೇತ್ರದ ಜನತೆ ಗೊಂದಲ ಆಗೋದು ಬೇಡ.
ಕೇಂದ್ರದಲ್ಲೇ ನಿರ್ಧಾರ ಆಗಿರೋದ್ರಿಂದ ನಾನೇ ಅಭ್ಯರ್ಥಿ ಅಂತ ಹೇಳೋದು ಸರಿಯಲ್ಲ ಜೆಡಿಎಸ್-ಬಿಜೆಪಿ ಮೈತ್ರಿ ಆಗಿರೋದ್ರಿಂದ ಯಾರಿಗೆ ಟಿಕೆಟ್ ಅನ್ನೋದು ಫೈನಲ್ ಆಗಿಲ್ಲ ಫೈನಲ್ ಆಗೋವರೆಗೂ ಮಾತಾಡೋದು ಬೇಡ ಎಂದು ಸುಮ್ಮನಿದ್ದೇನೆ!