ಕಲಬುರಗಿ: ನಾಯಿ ಮೇಲೆ ಚಿರತೆಯೊಂದು ದಾಳಿ ಮಾಡಿ ಸ್ಥಳೀಯರಲ್ಲಿ ಆತಂಕ ಹುಟ್ಟಿಸಿದ ಘಟನೆ ಕಲಬುರಗಿಯಲ್ಲಿ ನಡೆದಿದೆ. ಚಿತ್ತಾಪುರ ತಾಲೂಕಿನ ಲಾಡ್ಲಾಪುರ ಬಳಿ ಘಟನೆ ನಡೆದಿದ್ದು ಜಮೀನಿನಲ್ಲಿ ಓಡಾಡುತಿದ್ದ ನಾಯಿ ಮೇಲೆ ಚಿರತೆ ದಾಳಿ ಮಾಡಿದೆ..
ಗುಡ್ಡಗಾಡು ಪ್ರದೇಶವಾದ ಲಾಡ್ಲಾಪುರ ಸುತ್ತಮುತ್ತ ಕೆಲ ದಿನಗಳ ಹಿಂದೆ ಸಹ ಚಿರತೆ ಓಡಾಡಿದ್ದನ್ನ ಗ್ರಾಮಸ್ಥರು ಗಮನಿಸಿದ್ದಾರೆ..ಈ ಬಗ್ಗೆ ಅಲರ್ಟ್ ಆಗಿರುವ ಅರಣ್ಯ ಇಲಾಖೆ ಚಿರತೆ ಪತ್ತೆ ಮಾಡಲು ಮುಂದಾಗಿದೆ..