ತುಮಕೂರು:- ಗುಬ್ಬಿ ಪೊಲೀಸ್ ಠಾಣೆಯಿಂದ ಸರಗಳ್ಳ ಪರಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಖತರ್ನಾಕ್ ಕಳ್ಳ ಕೊನೆಗೂ ಸೆರೆ ಸಿಕ್ಕಿದ್ದಾನೆ.
ತುಮಕೂರು ಜಿಲ್ಲಾ ಪೊಲೀಸರ ಕ್ಷಿಪ್ರ ಕಾರ್ಯಾಚರಣೆಯಿಂದ ತಡರಾತ್ರಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಬೆಂಗಳೂರಿನಿಂದ ಬಾಂಬೆಗೆ ಪ್ರಯಾಣ ಮಾಡ್ತಿದ್ದ ಆರೋಪಿ ಸೈಯದ್ ಅಲಿ, ರೈಲಿನಲ್ಲಿ ಪರಾರಿಯಾಗ್ತಿದ್ದ. ತುಮಕೂರಿನ ರೈಲ್ವೆ ನಿಲ್ದಾಣದಲ್ಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಶುಕ್ರವಾರ ಬೆಳಗಿನಜಾವ 4.30 ಕ್ಕೆ ಗುಬ್ಬಿ ಪೊಲೀಸ್ ಠಾಣೆಯಿಂದ ಪರಾರಿಯಾಗಿದ್ದ. ಕೂಡಲೇ ಮೂರು ತಂಡಗಳ ಮೂಲಕ ಆರೋಪಿ ಪತ್ತೆಗೆ ಎಸ್ ಪಿ ಅಶೋಕ್ ವೆಂಕಟ್ ಬಲೆ ಬೀಸಿದ್ದಾರೆ.ಗುಬ್ಬಿಯಿಂದ ಬೆಂಗಳೂರು ತೆರಳಿ ಸ್ನೇಹಿತರಿಂದ ಹಣ ಪಡೆದು ಬಾಂಬೆಗೆ ಆರೋಪಿ ಸೈಯದ್ ಅಲಿ ಎಸ್ಕೇಪ್ ಆಗುತ್ತಿದ್ದ. ಬೆಂಗಳೂರಿನಲ್ಲಿ ಸುತ್ತಾಡಿ ತಡರಾತ್ರಿ ಎಸ್ಕೇಪ್ ಆಗ್ತಿದ್ದ.
ಆರೋಪಿಯು, ಇನ್ ಸ್ಟಾ ಕಾಲ್ ಸೇರಿದಂತೆ ಆನ್ ಲೈನ್ ಕಾಲ್ ನಲ್ಲಿ ಹಲವರ ಜೊತೆ ಮಾತಾಡಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿಯ ಚಲನವಲನ ಮೇಲೆ ತುಮಕೂರು ಪೊಲೀಸರು ಕಣ್ಣಿಟ್ಟಿದ್ದಾರೆ. ಪೊಲೀಸರ ಸಮಯಪ್ರಜ್ಞೆಯಿಂದ ಪರಾರಿಯಾಗ್ತಿದ್ದ ಆರೋಪಿಯನ್ನ ಘಟನೆ ನಡೆದು 40 ಗಂಟೆಯೊಳಗೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಕೋರ್ಟ್ ಗೆ ಹಾಜರ್ ಪಡಿಸಲು ಜೈಲಿನಿಂದ ಕರೆತಂದಿದ್ದ ಗುಬ್ಬಿ ಪೋಲಿಸರು, ಏಕಾಏಕಿ ಪೊಲೀಸರಿಗೆ ಎಮಾರಿಸಿ ಎಸ್ಕೇಪ್ ಆಗಿದ್ದ. ಸದ್ಯ ಈ ಸಂಬಂದ ಪಿಎಸ್ ಐ ದೇವಿಕಾ ಸೇರಿದಂತೆ ನಾಲ್ವರು ಸಿಬ್ಬಂದಿ ಎಸ್ ಪಿ ಅಶೋಕ್ ಅಮಾನತುಪಡಿಸಿದ್ದಾರೆ.