ಕೋಲಾರ:- ಹಣದ ಹಿಂದೆ ಹೋಗುತ್ತಿರುವ ಮನುಷ್ಯನಲ್ಲಿ ಪರಿಸರ, ಸಂಸ್ಕೃತಿ, ಸಮಾಜದ ಕುರಿತು ಕಳಕಳಿ ಬೆಳೆಸುವಲ್ಲಿ ಧಾನ್ ಫೌಂಡೇಷನ್ `ಹೊಸ ಸಾಮಾಜಿಕ ಕ್ರಮದ ಕಡೆಗೆ’ ಧ್ಯೇಯವಾಕ್ಯದೊಂದಿಗೆ ನಡೆಸುತ್ತಿರುವ ವಾಕಥಾನ್-2024 ಜಾಗೃತಿ ಜಾಥಾ ಪರಿಣಾಮಕಾರಿಯಾಗಿದೆ ಎಂದು ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಶಿವಾನಂದಹೊಗಲ ಅಭಿಪ್ರಾಯಪಟ್ಟರು.
ನಗರದ ಪತ್ರಕರ್ತರ ಭವನದಲ್ಲಿ ಧಾನ್ ಫೌಂಡೇಷನ್ ನಗರದಲ್ಲಿ ಶನಿವಾರ ನಡೆಸಿದ ಜಾಗೃತಿ ಜಾಥಾ ನಂತರದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಸಮಾಜ ಇಂದು ಹಣದ ಹಿಂದೆ ಸಾಗುತ್ತಿದೆ, ಪರಿಸರ ಕಾಳಜಿ ಇಲ್ಲವಾಗಿದೆ, ಸಂಸ್ಕೃತಿಯ ಬಗ್ಗೆ ಕಳಕಳಿ ಮರೆಯಾಗುತ್ತಿದ್ದು, ಭವಿಷ್ಯದಲ್ಲಿ ಇದು ಆತಂಕಕಾರಿ ಎಂದ ಅವರು, ಈ ನಿಟ್ಟಿನಲ್ಲಿ ಸಮಾಜದಲ್ಲಿ ಜಾಗೃತಿ ತರುವ ಪ್ರಯತ್ನ ಶ್ಲಾಘನೀಯ ಎಂದರು.
ಗಾಳಿ,ನೀರು,ಮಣ್ಣು ವಿಷಯುಕ್ತವಾಗುತ್ತಿದೆ, ಕೃಷಿಯಲ್ಲಿ ಅತಿಯಾದ ಕಳೆನಾಶಕ,ರಸಾಯನಿಕ ಗೊಬ್ಬರಗಳ ಬಳಕೆ ಮುಂದಿನ ಪೀಳಿಗೆಯ ಭವಿಷ್ಯವನ್ನು ನಾಶಮಾಡುವಷ್ಟರ ಮಟ್ಟಿಗೆ ಹೆಚ್ಚಳವಾಗಿದ್ದು, ಕೃಷಿಯನ್ನು ವಿವೇಚನೆಯಿಂದ ಮಾಡಬೇಕಾಗಿದೆ ಎಂದರು.
ಕೃಷಿಯಲ್ಲಿ ಬಳಸುವ ಮಲ್ಚಿಂಗ್ ಪ್ಲಾಸ್ಟಿಕ್ ಕಾಗದ ಮಣ್ಣಿನೊಂದಿಗೆ ಕರಗಿ ಸಸ್ಯದೇಹ ಸೇರಿ ಕಾಳಿನಲ್ಲೂ ಆವೃತವಾಗುತ್ತಿರುವ ಕುರಿತು ಸಂಶೋಧನೆಗಳು ಎಚ್ಚರಿಸಿವೆ ಎಂದು ಆತಂಕ ವ್ಯಕ್ತಪಡಿಸಿ, ನಮ್ಮಲ್ಲಿ ಬದಲಾವಣೆ ಅಗತ್ಯವಿದೆ ಎಂದರು.
ಬೈವೋಲ್ಟೆöÊನ್ ಉತ್ಪಾದನೆ ಅಗತ್ಯ ರೇಷ್ಮೆ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಮಾತನಾಡಿ, ಚೀನಾ ರೇಷ್ಮೆ ಆಮದು ತಡೆಯಲು ನಮ್ಮ ರೈತರು ಗುಣಮಟ್ಟದ ಬೈವೋಲ್ಟೆöÊನ್ ರೇಷ್ಮೆ ಉತ್ಪಾದನೆಗೆ ಆದ್ಯತೆ ನೀಡಬೇಕು, ಗುಣಮಟ್ಟಕ್ಕೆ ಒತ್ತು ನೀಡಬೇಕು, ಹಿಪ್ಪುನೇರಳೆ ಕೃಷಿಯಲ್ಲೂ ಆಧುನಿಕತೆ ಅಳವಸಿಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಲೀಡ್ ಬ್ಯಾಂಕ್ ವ್ಯವಸ್ಥಾಪಕ ಸುಧೀರ್ ಮಾತನಾಡಿ, ಮಹಿಳೆಯರಲ್ಲಿ ಸ್ವಾವಲಂಬನೆ ಬೆಳೆಸಲು ಆರ್ಥಿಕ ಸಹಾಯ ಒದಗಿಸುವ ಪ್ರಯತ್ನ ನಡೆಸಿರುವ ಧಾನ್ ಫೌಂಡೇಷನ್ನಡಿ ಅನೇಕ ಮಹಿಳಾ,ಪುರುಷ ಸ್ವಸಹಾಯ ಸಂಘಗಳ ಮೂಲಕ 32 ಕೋಟಿ ರೂ ಸಾಲ ಸೌಲಭ್ಯ ಒದಗಿಸಿರುವುದು ಶ್ಲಾಘನೀಯ ಎಂದರು.
ವಾಕಥಾನ್ ಮೂಲಕ ಪ್ರತಿ ವರ್ಷವೂ ಒಂದೊAದು ಸಾಮಾಜಿಕ ಕಾಳಜಿಯ ಧ್ಯೇಯವಾಕ್ಯದಡಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯವಾಗಿದೆ ಎಂದ ಅವರು, ಜಲಸಂಪನ್ಮೂಲಗಳ ರಕ್ಷಣೆ, ಅನೀಮಿಯಾ ತಡೆ, ಹವಾಮಾನ ಬದಲಾವಣೆ,ಮಹಿಳಾ ಸಬಲೀಕರಣ, ಸುಸ್ಥಿರ ಅಭಿವೃದ್ದಿಗೆ ಸಮುದಾಯದ ಕೊಡುಗೆ ಹೀಗೆ ಒಂದೊAದು ಧ್ಯೇಯವಾಕ್ಯದಡಿ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ ಎಂದರು.
ಧಾನ್ ಫೌಂಡೇಷನ್ ಕಾರ್ಯಕ್ರಮದ ಮುಖ್ಯಸ್ಥರಾದ ಮುದುರೈನ ಎನ್.ವೆಂಕಟೇಶನ್ ಸಂಸ್ಥೆ ಕುರಿತು ಮಾಹಿತಿ ನೀಡಿ, 25 ವರ್ಷಗಳ ಹಿಂದೆ ಬಡವರ ಏಳಿಗೆಗಗಿ ಆರಂಭವಾದ ಸರ್ಕಾರೇತರ ಸಂಸ್ಥೆಯಾಗಿದ್ದು, 14 ರಾಜ್ಯಗಳಲ್ಲಿ ಸ್ವಸಹಾಯ ಸಂಘಗಳನ್ನು ರಚಿಸಿ 16 ಲಕ್ಷ ಬಡಕುಟುಂಬಗಳೊAದಿಗೆ ಕಾರ್ಯ ನಿರ್ವಹಿಸುತ್ತಿದೆ,2006ರಲ್ಲಿ ಕೋಲಾರಕ್ಕೆ ಕಾಲಿಟ್ಟು ಇಲ್ಲಿಯೂ ಉಳಿತಾಯ, ಆರ್ಥಿಕ ಭದ್ರತೆ,ಮಹಿಳೆಯರ ಸರ್ವತೋಮುಖ ಬೆಳೆವಣಿಗೆಗೆ ಕೆಲಸ ಮಾಡುತ್ತಿದೆ ಎಂದರು.
ಕರ್ನಾಟಕದಲ್ಲಿ7500 ಗುಂಪುಗಳನ್ನೊಳಗೊAಡ 36 ಒಕ್ಕೂಟಗಳನ್ನು ನಿರ್ಮಿಸಿ 1.5 ಲಕ್ಷ ಕುಟುಂಬಗಳ ಜತೆ ಸಹಭಾಗಿತ್ವ ಹೊಂದಿದೆ, ಕೋಲಾರ ಜಿಲ್ಲೆಯಲ್ಲಿ4 ತಾಲ್ಲೂಕುಗಳ ಒಟ್ಟು242 ಗ್ರಾಮಗಳಲ್ಲಿ 194 ಗ್ರಾಮ ಮಟ್ಟದ ವಲಯ ಸಂಘಗಳು, 406 ಮಹಿಳಾ,ಪುರುಷ ಸವಸಹಾಯ ಸಂಘಗಳಡಿ 26ಸಾವಿರ ಬಡ ಕುಟುಂಬಗಳು ಸೇರ್ಪಡೆಯಾಗಿದ್ದು 810.00 ಲಕ್ಷ ಉಳಿತಾಯ ಮಾಡಿಸಿ 32ಕೋಟಿ ರೂ ಸಾಲ ನೀಡಲಾಗಿದೆ,ಕೆರೆ,ಅಭಿವೃದ್ದಿ, ಜಲಾಯನಯನ, ಮಣ್ಣು,ನೀರಿನ ಸಂರಕ್ಷಣೆ ಸೇರಿ 9.80 ಕೋಟಿ ರೂ ಕೆಲಸ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಪುರುಷ,ಮಹಿಳಾ ಸಂಘಗಳಿಗೆ ಸಾಲ ಸೌಲಭ್ಯ ನೀಡಲಾಯಿತು. ಕಾರ್ಯಕ್ರಮಕ್ಕೂ ಮುನ್ನಾ ನಗರದ ಜೂನಿಯರ್ ಕಾಲೇಜು ಮೈದಾನದಿಂದ ಮಹಿಳಾ ಸಂಘಗಳ ಪ್ರತಿನಿಧಿಗಲು ಜಾಗೃತಿ ಜಾಥಾ ವಾಕಥಾನ್ ನಡೆಸಿ ಸಮಾಜದಲ್ಲಿ ಅರಿವು ಮೂಡಿಸುವ ಪ್ರಯತ್ನ ನಡೆಸಿದರು.
ಇದೇ ಸಂದರ್ಭದಲ್ಲಿ ನಡೆಸಲಾದ ಪ್ರೌಢಶಾಲಾ ವಿದ್ಯಾರ್ಥಿಗಳ `ಸಾಮಾಜಿಕ ರೂಢಿಗಳ ಅಭ್ಯಾಸ. ಕುರಿತ ಪ್ರಬಂಧ ಸ್ಪರ್ಧೆ ವಿಜೇತರಾದ ಅರಾಭಿಕೊತ್ತನೂರು ಶಾಲೆಯ ವಿಲಾಸ್,ಮನೋಜ್,ಮಮತಾರಿಗೆ ಬಹುಮಾನ ವಿತರಿಸಿದರು.
ತೋಟಗಾರಿಕಾ ಇಲಾಖೆಸಹಾಯಕ ನಿರ್ದೇಶಕ ಪರಮೇಶ್, ಆರ್ಥಿಕ ಸಾಕ್ಷರತಾ ಕೇಂದ್ರದ ವಿಶಾಲಾಕ್ಷಿ, ಧಾನ್ ಫೌಂಡೇಷನ್ ಸಂಯೋಜಕ ಶಂಕರಯ್ಯ, ಕೋಲಾರ ತಾಲ್ಲೂಕು ಸಂಯೋಜಕ ರಮೇಶ್, ಮಾಲೂರು ತಾಲೂಕು ಸಂಯೋಜಕ ದೇವರಾಜ್, ಯೋಗೇಶ್, ರೈತ ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಪ್ಪ, ಕಮಲಮ್ಮ, ಶ್ರೀಕೃಷ್ಣ, ಹನುಮಪ್ಪ, ಸುರೇಶ್, ವೇಣುಗೋಪಾಲ್ ಜಲಾನಯನ ತಡದ ನಾಯಕ ರಮೇಶ್,ಸಹಾಯಕರಾದ ಅರಾಭಿಕೊತ್ತನೂರು ರಾಮಚಂದ್ರಪ್ಪ, ಅರುಣಮ್ಮ, ವ್ಯವಸ್ಥಾಪಕ ಮಂಜುನಾಥ್ ಮತ್ತಿತರರಿದ್ದರು