ಆನೇಕಲ್:– ರೈತರ ತೋಟಕ್ಕೆ ಕಾಡಾನೆ ದಾಳಿ ನಡೆಸಿ ಸಿಮೆ ಬದನೆ ಪಡವಲ ಬೆಳೆ ಜೊತೆ ಚಪ್ಪರ ನಾಶ ಮಾಡಿದ ಘಟನೆ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿ ಬಳಿ ಜರುಗಿದೆ.
ವೆಂಕಟೇಶ್ ಎಂಬ ರೈತರಿಗೆ ಸೇರಿದ ತೋಟ ಇದಾಗಿದ್ದು, ರಾತ್ರಿ ಬಂದಿದ್ದ ಒಂಟಿ ಸಲಗದಿಂದ ಬೆಳೆನಾಶ ಮಾಡಲಾಗಿದೆ. ಬಿರು ಬೇಸಿಗೆಯಲ್ಲು
ಸೀಮೆಬದನೆ ಬೆಳೆದಿದ್ದೆ. ಪಡವಲ ಬೆಳೆ ನಾಟಿ ಮಾಡಿದ್ದೆ. ಆದ್ರೆ ರಾತ್ರಿ ಬಂದ ಕಾಡಾನೆ ಬೆಳೆ ನಾಶ ಮಾಡಿದೆ. ಈ ಹಿಂದೆ ಸಹ ಕಾಡಾನೆಗಳಿಂದ ಬೆಳೆನಾಶ ಮಾಡಲಾಗಿದೆ.
ಇಲ್ಲಿಯವರೆಗೆ ಅರಣ್ಯ ಇಲಾಖೆ ಪರಿಹಾರ ನೀಡಿಲ್ಲ ಎಂದು ರೈತ ವೆಂಕಟೇಶ್ ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದೆ.