ಚಾಮರಾಜನಗರ ತಾಲೂಕಿನ ಹೆಗ್ಗೋಠಾರ ಗ್ರಾಮಕ್ಕೆ ಇಂದು ಬಿಗ್ಬಾಸ್ ವಿಜೇತ ಕಾರ್ತಿಕ್ ಮಹೇಶ್ ಭೇಟಿ ನೀಡಲಿದ್ದಾರೆ.
ಈ ಬಾರಿಯ ಕನ್ನಡ ಬಿಗ್ಬಾಸ್ ಸೀಸನ್ 10 ವಿಜೇತರಾಗಿರುವ ಕಾರ್ತಿಕ್ ಮಹೇಶ್ (Karthik Mahesh) ಹೆಗ್ಗೋಠಾರಕ್ಕೆ ಭೇಟಿ ನೀಡುವ ಬಗ್ಗೆ ಸ್ವತಃ ಅವರೇ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಗ್ರಾಮಸ್ಥರು ಅವರಿಗಾಗಿ ಮೆರವಣಿಗೆ ಮತ್ತು ಇತರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ
ಕಾರ್ತಿಕ್ ಮೂಲತಃ ಮೈಸೂರಿನವರು. ಆದರೆ ಹುಟ್ಟಿದ್ದು ತಾಯಿಯ ತವರು ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಅವರಿಗೆ ಹೆಗ್ಗೋಠಾರ ಗ್ರಾಮದೊಂದಿಗೆ ಅವಿನಾವಭಾವ ಸಂಬಂಧವಿದೆ. ಮಧ್ಯಾಹ್ನ 2 ಗಂಟೆಗೆ ಗ್ರಾಮಸ್ಥರು ಕಾರ್ತಿಕ್ಗಾಗಿ ಮೆರವಣಿಗೆ ಮತ್ತು ಅಭಿನಂದನಾ ಸಮಾರಂಭವನ್ನು ಆಯೋಜಿಸಿದ್ದಾರೆ. ಸಂಜೆ ಗ್ರಾಮಸ್ಥರು ಮತ್ತು ಸಂಬಂಧಿಕರು ಆಯೋಜಿಸಿರುವ ಅಭಿನಂದನಾ ಸಮಾರಂಭದಲ್ಲಿ ಕಾರ್ತಿಕ್ ಇರಲಿದ್ದಾರೆ.