ಹಾಸನ :- ಜಿಲ್ಲೆ ಅರಸಿಕೆರೆಯಲ್ಲಿ ಮಡಿವಾಳ ಮಾಚಿದೇವ ಜಯಂತಿಯ ಆಚರಣೆಯನ್ನು ಇಂದು ತಾಲೂಕು ಆಡಳಿತ ವತಿಯಿಂದ ತಾಲೂಕು ಕಚೇರಿ ಕಂದಾಯ ಭವನದಲ್ಲಿ ಆಚರಿಸಲಾಯಿತು.
ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ಶ್ರೀ ಕೆಎಂ ಶಿವಲಿಂಗೇಗೌಡ ರವರು ದೀಪ ಬೆಳಗಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಸಮಾಜದ ಅಧ್ಯಕ್ಷರಾದ ಬಾಗೇಶಪುರ ಶಿವಣ್ಣ ಮಾಜಿ ಅಧ್ಯಕ್ಷ ಶಿವಕುಮಾರ್ ತಾಲೂಕು ತಹಸಿಲ್ದಾರ್ ಎಮ್ ಜಿ ಸಂತೋಷ್ ಕುಮಾರ್ ತಾಲೋಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ್ ಸಮಾಜದ ಮುಖಂಡರಾದ ಅಶೋಕ್. ದೇವರಾಜು. ಡಿ ಎಂ ಕುರ್ಕೆ ಸುರೇಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು