ಬೆಂಗಳೂರು: ಕೇಂದ್ರ ಸರ್ಕಾರದ ವಿರುದ್ಧ ರಣಕಹಳೆ ಮೊಳಗಿಸಲು ಕಾಂಗ್ರೆಸ್ ನಾಯಕರು ಸಜ್ಜಾಗ್ತಿದ್ದಾರೆ.ರಾಜ್ಯಕ್ಕೆ ಬರಬೇಕಾದ ಪರಿಹಾರ ನೀಡದೇ, ಮಲತಾಯಿ ಧೋರಣೆ ಮಾಡ್ತಿದ್ದಾರೆ ಎಂದು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ.. ಸಿಎಂ, ಡಿಸಿಎಂ, ಸಚಿವರು, ಶಾಸಕರೆಲ್ಲಾ ಫೆಬ್ರವರಿ ಏಳು ರಂದು ರಾಷ್ಟ್ರ ರಾಜಧಾನಿಯಲ್ಲಿ ರಣಕಹಳೆ ಮೊಳಗಿಸಲು ಮುಂದಾಗಿದ್ದಾರೆ.
ಯೆಸ್.. ಅನುಧಾನ ತಾರತಮ್ಯ, ಕೇಂದ್ರ ಬಜೆಟ್ ನಲ್ಲಿ ರಾಜ್ಯ ಕಡೆಗಣನೆ ವಿರೋಧಿಸಿ ಸಂಸದ ಡಿ.ಕೆ ಸುರೇಶ್ ಆಕ್ರೋಶ ಹೊರಹಾಕಿದ ಬೆನ್ನಲ್ಲೇ, ರಾಜ್ಯ ಸರ್ಕಾರ ಸೆಟೆದು ನಿಂತಿದೆ. ತಾರತಮ್ಯ ಹೀಗೆ ಮುಂದುವರೆದರೆ ಪ್ರತ್ಯೇಕ ರಾಷ್ಟ್ರ ಧ್ವನಿ ಎತ್ತಬೇಕಾಗುತ್ತೆ ಅಂತಾ ಡಿ.ಕೆ ಸುರೇಶ್ ಹೇಳಿದ್ದೇ ತಡ, ಕೋಲಾಹಲವೇ ಸೃಷ್ಠಿಯಾಗಿತ್ತು. ಈಗ ಕಾಂಗ್ರೆಸ್ ನಾಯಕರೆಲ್ಲಾ ಕೇಂದ್ರ ಸರ್ಕಾರದ ವಿರುದ್ಧ ಮುಗಿಬೀಳೋಕೆ ತೀರ್ಮಾನ ಮಾಡಿದ್ದಾರೆ. ಪ್ರಧಾನಿ ಮೋದಿ ಮಲತಾಯಿ ಧೋರಣೆ ಮಾಡ್ತಿದ್ದಾರೆಂದು ಫೆಬ್ರವರಿ ಏಳನೇ ತಾರೀಖು ದೆಹಲಿ ಚಲೋ ಹಮ್ಮಿಕೊಂಡಿದ್ದಾರೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರೆಲ್ಲರೂ ದೆಹಲಿ ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಐದು ವರ್ಷಗಳಿಂದ ರಾಜ್ಯಕ್ಕೆ ಬರಬೇಕಾದ 62 ಸಾವಿರ ಕೋಟಿ ಹಣವನ್ನ ನೀಡದೇ, ತಡೆ ಹಿಡಿದಿದ್ದಾರೆ.. 2018-19 ರಲ್ಲಿ ಕೇಂದ್ರ ಬಜೆಟ್ ಗಾತ್ರ 24.5 ಲಕ್ಚ ಕೋಟಿ ಇತ್ತು. ಈಗ ಬಜೆಟ್ ಗಾತ್ರ ಡಬಲ್ ಆಗಿದ್ರೂ, ಪರಿಹಾರ ಸಿಗ್ತಾ ಇಲ್ಲ. ಪಕ್ಷಾತೀತವಾಗಿ ಎಲ್ಲಾ ಸಂಸದರು ಈ ಪ್ರತಿಭಟನೆಯಲ್ಲಿ ಭಾಗಿಯಾಗಬೇಕು ಅಂತಾ ಡಿಸಿಎಂ ಡಿ.ಕೆ ಶಿವಕುಮಾರ್ ಕರೆ ನೀಡಿದ್ದಾರೆ..
ವಾಯ್ಸ್; ಇನ್ನು ಪ್ರಧಾನಿ ಮೋದಿ, ಕೇಂದ್ರ ಸಚಿವರನ್ನ ಹಲವು ಬಾರಿ ಭೇಟಿ ಮಾಡಿ ಮನವಿ ಮಾಡಿದ್ರೂ ಕೇರ್ ಮಾಡಿಲ್ಲ.. ರಾಜ್ಯದಲ್ಲಿ ಇನ್ನೂರಕ್ಕೂ ಹೆಚ್ಚು ತಾಲೂಕುಗಳನ್ನ ಬರಪೀಡಿತ ಎಂದು ಘೋಷಣೆ ಮಾಡಲಾಗಿದೆ.. ತೆರಿಗೆ ಪಾವತಿಯಲ್ಲಿ ಕರ್ನಾಟಕ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ನ್ಯಾಯಯುತ ಪಾಲು ನಮಗೆ ಸಿಗ್ತಾ ಇಲ್ಲ. ಅಪ್ಪರ್ ಭದ್ರಾ ಯೋಜನೆಗೆ ಐದು ಸಾವಿರ ಕೋಟಿ ಕೊಡ್ತೀವಿ ಅಂದ್ರು.. ಮೆಟ್ರೋ ಕಾಮಗಾರಿ ಕ್ಲಿಯರ್ ಮಾಡ್ತೀವಿ ಅಂದಿದ್ರು. ಯಾವುದೂ ಮಾಡಿಲ್ಲ.. ಇದನ್ನ ನಾವು ಡೈಜೆಸ್ಟ್ ಮಾಡಿಕೊಳ್ಳೋದು ಹೇಗೆ..? ಹೀಗಾಗಿ ಹೋರಾಟವೊಂದೇ ದಾರಿ ಎಂದು ಡಿ.ಕೆ ಶಿವಕುಮಾರ್ ಆಕ್ರೋಶ ಹೊರಹಾಕಿದ್ರು..
ದೇವೇಗೌಡ್ರು, ಬಿಜೆಪಿ ಸಂಸದರು ಸೇರಿ ಪಕ್ಷಾತೀತವಾಗಿ ಎಲ್ಲಾರೂ ಹೋರಾಟದಲ್ಲಿ ಭಾಗಿಯಾಗಬಹುದು ಎಂದು ಡಿಕೆ ಶಿವಕುಮಾರ್ ಹೇಳಿದ್ರು. ಈ ವೇಳೆ ದೇವೇಗೌಡ್ರ ಕುಟುಂಬ ಕಲಹದ ಬಗ್ಗೆಯೂ ಡಿಕೆ ಶಿವಕುಮಾರ್ ಸೂಚ್ಯ ಮಾತುಗಳನ್ನಾಡಿದ್ರು. ಕುಮಾರಸ್ವಾಮಿ ಬಿಜೆಪಿಯ ಸ್ಪೋಕ್ಸ್ ಪರ್ಸನ್ ಆಗಿಬಿಟ್ಟಿದ್ದಾರೆ. ನಾನು ದೇವೇಗೌಡರ ಸಿದ್ದಾಂತವನ್ನು ಹತ್ತಿರದಿಂದ ನೋಡಿದ್ದೇನೆ. ಪಾಪ ವಯಸ್ಸಾದ ಕಾಲದಲ್ಲಿ ಅವರಿಗೆ ಮನೆಯಲ್ಲಿ ಇಂತಹ ನೋವು ಕೊಟ್ಟಿದ್ದಾರೆ. ನಮಗೂ ಮಕ್ಕಳಿದ್ದಾರೆ. ವಯಸ್ಸಾದ ಕಾಲದಲ್ಲಿ ಏನಾಗುತ್ತೋ ಏನೋ.. ನನಗೆ ಈಗಲೇ ಭಯವಾಗುತ್ತಿದೆ. ಅಸೆಂಬ್ಲಿಯಲ್ಲಿ ನೋಡಿದ್ರಲಾ ಯಾರು ಯಾರಿಗೆ ಕಲ್ಲು ಹೊಡೆದ್ರು ಅಂತಾ.. ನನ್ನ ಬಳಿ ಅವರದ್ದು ದೊಡ್ಡ ಪಟ್ಟಿಯೇ ಇದೆ ಎಂದು ಪರೋಕ್ಷವಾಗಿ ದೇವೇಗೌಡರ ಕುಟುಂಬ ಕಲಹವನ್ನ ಡಿಕೆಶಿ ಕೆದಕಿದ್ರು..
ಒಟ್ಟಾರೆ, ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ವಿರುದ್ಧ ಅನುದಾನ ಫೈಟ್ ಮಾಡಲು ಕಾಂಗ್ರೆಸ್ ಮುಂದಾಗಿದೆ.ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಇಡೀ ಸರ್ಕಾರ ದೆಹಲಿಯಲ್ಲಿ ಕೇಂದ್ರ ಸರಕಾರದ ವಿರುದ್ಧ ಹೋರಾಟ ಮಾಡಲು ಕಾಂಗ್ರೆಸ್ ಪಕ್ಷ ತೀರ್ಮಾನ ಮಾಡಿದೆ.