ಬೆಂಗಳೂರು: ಇತೀಚೆಗೆ ಬೆಂಗಳೂರು ಎಷ್ಟು ಸೇಫ್ ಅನ್ನೋ ಭಯ ಶುರುವಾಗಿದೆ . ಯಾಕಂದ್ರೆ ಹಗಲು ಅನ್ನೋಲ್ಲ.. ರಾತ್ರಿ ಅನ್ನಲ್ಲ ರಾಬರಿ, ಕಳ್ಳತನ, ದರೋಡೆ ನಡೀತಾನೇ ಇವೆ . ಹೀಗೆ ನಿನ್ನೆ ಮಟ ಮಟ ಮಧ್ಯಾಹ್ನನವೇ ರಾಬರಿಯೊಂದು ನಡೆದಿದೆ.. ಠಾಣೆಯೊಂದರ ಸ್ವಲ್ಪ ದೂರದಲ್ಲೇ ಗನ್ ಇಟ್ಟು, ಮಚ್ಚು ತೋರಿಸಿ ಲಕ್ಷಾಂತರ ರೂಪಾಯಿ ದೋಚಿದ್ದಾರೆ..
ಹೌದು ಬೆಂಗಳೂರಿನಲ್ಲಿ ನಡೆಯೋ ಕೆಲ ಕ್ರೈಂಗಳನ್ನ ನೋಡಿದ್ರೆ ನಿಜಕ್ಕೂ ಸೇಫ್ಟಿ ಇದ್ಯಾ ಇಲ್ಲಿ ಅನ್ನೋ ಅನುಮಾನ ಮೂಡದೆ ಇರೋದಿಲ್ಲ.. ಹಾಡು ಹಗಲೇ ಕೆಲವೊಮ್ಮೆ ಭಯಂಕರ ಘಟನೆಗಳು ನಡೆದುಬಿಡುತ್ವೆ.. ನಿನ್ನೆ ಅನ್ನಪೂರ್ಣೇಶ್ವರಿ ನಗರ ಠಾಣಾ ವ್ಯಾಪ್ತಿಯಲ್ಲಿ ನಡೆದಿರೋದು ಕೂಡ ಅದೇ.. ಠಾಣೆಯಿಂದ 600ಮೀಟರ್ ದೂರ ಅನ್ಸುತ್ತೆ.. ಏಕಾ ಏಕಿ ಡಿಯೋ ಬೈಕ್ ನಲ್ಲಿ ಎಂಟ್ರಿ ಕೊಟ್ಟಿದ್ದ ನಾಲ್ವರು ಒಬ್ಬ ವ್ಯಕ್ತಿಯನ್ನ ಅಡ್ಡ ಹಾಕಿ ಆತನ ತಲೆಗೆ ಗನ್ ಇಟ್ಟು, ಮಚ್ಚು ತೋರಿಸಿ ಹದಿನೈದು ಲಕ್ಷ ದರೋಡೆ ಮಾಡಿದ್ದಾರೆ..
ಅಂದ್ಹಾಗೆ ನಿನ್ನೆ ಎಕ್ಸಾಟ್ಲಿ ಮಧ್ಯಾಹ್ನ 1.30ರ ಸಮಯ ಅನ್ಸುತ್ತೆ ಆ ಟೈಮಲ್ಲಿ ನಡೆದಿರೋ ಘಟನೆ ಇದು.. ಗೋಪಾಲ್ ಎಂಬಾತ ಸಿಗರೆಟ್ ಡಿಸ್ಟಿಬ್ಯೂಷನ್ ಕೆಲಸ ಮಾಡ್ತಿದ್ದ.. ಅಂಗಡಿ ಅಂಗಡಿಗೆ ಹೋಗಿ ಲಕ್ಷಾಂತರ ರೂಪಾಯಿ ಬಿಲ್ ಕನೆಕ್ಟ್ ಮಾಡೋದು ಕೂಡ ಈತನ ಕೆಲಸ.. ನಿನ್ನೆ ತನ್ನ ರೊಟೀನ್ ವರ್ಕ್ ಅಂತಾ ಹಣ ಕಲೆಕ್ಟ್ ಮಾಡೋ ಕೆಲಸ ಮಾಡ್ತಿದ್ದ.. ಮಧ್ಯಾಹ್ನದೊತ್ತಿಗೆ ಹತ್ತು ಹದಿನೈದು ಲಕ್ಷ ಹಣವೂ ಕಲೆಕ್ಟ್ ಮಾಡಿದ್ದ.. ಹಂಗೆನೇ ಮಧ್ಯಾಹ್ನ 1.30ರ ಸುಮಾರಿಗೆ ಅನ್ನಪೂರ್ಣೇಶ್ವರಿ ನಗರ ಠಾಣೆ ಬಳಿಯ ಮಮತಾ ಸೂಪರ್ ಬಜಾರ್ ಎಂಬ ಪ್ರಾವಿಸನ್ ಸ್ಟೋರ್ ಗೆ ಬಿಲ್ ಕಲೆಕ್ಟ್ ಮಾಡಿಕೊಳ್ಳೋಕೆ ಬಂದಿದ್ದ.. ಈ ವೇಳೆ ಮೊದಲೇ ಆತನನ್ನ ಫಾಲೋ ಮಾಡಿಕೊಂಡು ಬಂದಿದ್ದ ನಾಲ್ವರು ದುಷ್ಕರ್ಮಿಗಳು ಡಿಯೋ ಬೈಕ್ ನಲ್ಲಿ ಬಂದಿಳಿದಿದ್ರು.. ಹೆಲ್ಮೆಟ್ ಹಾಕೊಂಡು ಕೈಯಲ್ಲಿ ಗನ್, ಲಾಂಗು, ಮಚ್ಚು ಹಿಡ್ಕೊಂಡು ಗೋಪಾಲ್ ಬಳಿ ಅಟ್ಯಾಕ್ ಮಾಡಿದ್ರು.. ಆತನ ಮುಖಕ್ಕೆ ಸ್ಪ್ರೇ ಮಾಡಿ ಆತನ ಬಳಿ ಇದ್ದ ಹದಿನೈದು ಲಕ್ಷ ಹಣದ ಬ್ಯಾಕ್ ಕಿತ್ಕೊಂಡು ಮತ್ತೆ ಬಂದಿದ್ದ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ..
ಸದ್ಯ ಘಟನೆ ವಿಚಾರ ತಿಳಿದ ಕೂಡಲೇ ಅನ್ನಪೂರ್ಣೇಶ್ವರಿ ನಗರ ಪೊಲೀಸರು ಸ್ಪಾಟ್ ಗೆ ಬಂದಿದ್ದಾರೆ.. ಕ್ಷಣ ಮಾತ್ರದಲ್ಲೇ ಪೊಲೀಸರ ಕಣ್ತಪ್ಪಿಸಿ ಆರೋಪಿಗಳು ಎಸ್ಕೇಪ್ ಆಗಿದ್ದಾರೆ.. ಸದ್ಯ ಪೊಲೀಸರೇನೋ ತನಿಖೆ ನಡೆಸ್ತಿದ್ದಾರೆ.. ಆದ್ರೆ ಠಾಣೆಯ ಹತ್ತಿರದಲ್ಲೇ ಇಂತಹ ಘಟನೆ.. ಅದ್ರಲ್ಲೂ ಮಟ ಮಟ ಮಧ್ಯಾಹ್ನ ಇಂತಹ ರಾಬರಿ ನಡೆದಿರೋದು ಜನ್ರಲ್ಲಿ ಭಯ ಹೆಚ್ಚಿಸಿರೋದಂತು ನಿಜ