ಬೆಂಗಳೂರು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಆಪರೇಷನ್ ಕಮಲ ಕುರಿತು ಹೇಳಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿಡಿಮಿಡಿಗೊಂಡರು.
ನಗರದಲ್ಲಿ ಮಾತನಾಡಿ ಅವರು, ಆಪರೇಷನ್ ಅಂದ್ರೆ ಏನು..? ಹೇಳು.. ಆಪರೇಷನ್ ಅಂದ್ರೆ ಏನಯ್ಯಾ..? ಅವರಿಗೆ ಆಪರೇಷನ್ ಬಿಟ್ರೆ ಬೇರೆ ಗೊತ್ತಿಲ್ಲ ಎಂದು ಗರಂ ಆದರು.
ಆಪರೇಷನ್ ಅಂದ್ರೆ ದುಡ್ಡು ಕೊಟ್ಟು ಕೊಂಡುಕೊಳ್ಳೋದು. ಅವರಿಗೆ ಜನರಲ್ಲಿ ವಿಶ್ವಾಸ ಗಳಿಸೋದು ಗೊತ್ತಿಲ್ಲಾ. ಅವರು ಈ ಹಿಂದೇನೂ ಎರಡು ಸಲಿ ಹಾಗೆ ಮಾಡಿದಾರೆ. ಪೂರ್ಣ ಪ್ರಮಾಣದಲ್ಲಿ ಇವರು ಗೆದ್ದೇ ಇಲ್ಲಾ. ಅವರು ಯಾವಾಗಲೂ ಮೆಜಾರಿಟಿಯಿಂದ ಗೆದ್ದಿಲ್ಲ. ಆದ್ರೆ, 2013, 2023 ರಲ್ಲಿ ನಾವು ಕಾಂಗ್ರೆಸ್ ನವರು ಗೆದ್ದಿದ್ದೇವೆ. ನಾವು ಜನಮತ ಪಡೆದು ಬರ್ತೆವೆ, ಅವರು ಆಪರೇಷನ್ ಮಾಡಿ ಬರ್ತಾರೆ ಎಂದು ಛೇಡಿಸಿದರು.