ನವದೆಹಲಿ:- ಕೇಂದ್ರ ಸಚಿವೆ ಸೀತಾರಾಮನ್ ಅವರು ಮಂಡಿಸಿದ 6 ನೇ ಬಜೆಟ್ ನಲ್ಲಿ ಅಭಿವೃದ್ಧಿಗೆ ಪೂರಕವಾಗಿರುವ ಅಂಶಗಳೇನು ಎಂಬುವ ವಿವರವನ್ನು ಇಲ್ಲಿ ತಿಳಿಸಲಾಗಿದೆ ವರದಿ ಪೂರ್ತಿ ಓದಿ.
ತಮ್ಮ ಚುಟುಕು ಬಜೆಟ್ನಲ್ಲಿ ಮುಂದಿನ ದಿನಗಳ ಬಗ್ಗೆ ನಿರ್ಮಲ ಸೀತಾರಾಮನ್ ಅವರು ಸರ್ಕಾರಕ್ಕಿರುವ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ದೀರ್ಘಾವಧಿಯಲ್ಲಿ ಸ್ವಾವಲಂಬನೆ ಸಾಧಿಸಲು ಸರ್ಕಾರದ ಗುರಿಗಳೇನು, ಯಾವ್ಯಾವ ಕಾರ್ಯಕ್ರಮಗಳಿಗೆ ಒತ್ತುಕೊಡಲಿದೆ ಎಂಬುದನ್ನು ಸೂಚ್ಯವಾಗಿ ತಿಳಿಸಿದ್ದಾರೆ. ಒಂದು ವೇಳೆ ಚುನಾವಣೆಯಲ್ಲಿ ಗೆದ್ದು ಮತ್ತೆ ಅಧಿಕಾರಕ್ಕೆ ಬಂದು ಮಂಡಿಸಬಹುದಾದ ಬಜೆಟ್ನಲ್ಲಿ ಯಾವೆಲ್ಲಾ ಅಂಶಗಳು ಇರಬಹುದು ಎಂಬುದಕ್ಕೆ ಈ ಮಧ್ಯಂತರ ಬಜೆಟ್ ಟ್ರೇಲರ್ ರೀತಿ ಇದೆ. ಬಜೆಟ್ನಲ್ಲಿ ಸರ್ಕಾರ ಹಾಕಿರುವ ಮತ್ತು ಉದ್ದೇಶಿಸಿರುವ ಯೋಜನೆಗಳ ವಿವರ ಇಲ್ಲಿದೆ.
ಸುಸ್ಥಿರ ಅಭಿವೃದ್ಧಿ
2070ರೊಳಗೆ ಕಾರ್ಬನ್ ಹೊರಸೂಸುವಿಕೆಯ ಪ್ರಮಾಣ ಶೂನ್ಯಕ್ಕೆ ತರುವ ಬದ್ಧತೆ
ವಿಂಡ್ ಎನರ್ಜಿ ಉತ್ಪಾದನೆಗೆ ವಯಬಿಲಿಟಿ ಗ್ಯಾಪ್ ಫಂಡಿಂಗ್
ಕಲ್ಲಿದ್ದಲು ಅನಿಲೀಕರಣ ಮತ್ತು ಜಲೀಕರಣ ಘಟಕ ಆರಂಭ
ಸಿಎನ್ಜಿ, ಪಿಎನ್ಜಿ ಮತ್ತು ಒತ್ತಡೀಕೃತ ಬಯೋಗ್ಯಾಸ್ನ ಮಿಶ್ರಣವನ್ನು ಹಂತ ಹಂತವಾಗಿ ಕಡ್ಡಾಯಗೊಳಿಸಲಾಗುವುದು.
ಸೂರಿನ ಮೇಲೆ ಸೌರಫಲಕ ಹಾಕುವ ಯೋಜನೆ ಮೂಲಕ ಒಂದು ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್ಗಳವರೆಗೆ ಉಚಿತ ವಿದ್ಯುತ್ ಸಿಗುವಂತೆ ಮಾಡುವ ಗುರಿ ಇದೆ.
ಸಾರ್ವಜನಿಕ ಸಾರಿಗೆಗೆ ಇ ಬಸ್ಸುಗಳ ಬಳಕೆ
ಬಯೋ ಮ್ಯಾನುಫ್ಯಾಕ್ಚರಿಂಗ್ ಮತ್ತು ಬಯೋ ಫೌಂಡ್ರಿಯ ಹೊಸ ಯೋಜನೆ
ಇನ್ಫ್ರಾಸ್ಟ್ರಕ್ಚರ್ ಮತ್ತು ಹೂಡಿಕೆ
ಪಿಎಂ ಗತಿ ಶಕ್ತಿ ಯೋಜನೆ ಅಡಿಯಲ್ಲಿ 3 ಪ್ರಮುಖ ರೈಲ್ವೆ ಕಾರಿಡಾರ್ ಯೋಜನೆಗಳ ಜಾರಿ
ದ್ವಿಪಕ್ಷೀಯ ಹೂಡಿಕೆ ಒಪ್ಪಂದಗಳ ಮೂಲಕ ವಿದೇಶೀ ಹೂಡಿಕೆ ಬರಮಾಡಿಕೊಳ್ಳಲಾಗುವುದು.
ಉಡಾನ್ ಸ್ಕೀಮ್ ಅಡಿಯಲ್ಲಿ ಈಗಿರುವ ಏರ್ಪೋರ್ಟ್ ಅಭಿವೃದ್ದಿಪಡಿಸಲಾಗುವುದ.
ಹೊಸ ಏರ್ಪೋರ್ಟ್ ಸ್ಥಾಪಿಸಲಾಗುವುದು.
ಮೆಟ್ರೋ ರೈಲು ಮತ್ತು ನಮೋ ಭಾರತ್ ಮೂಲಕ ನಗರ ಪ್ರದೇಶದಲ್ಲಿ ಪರಿವರ್ತನೆ ತರಲಾಗುವುದು
ಆರೋಗ್ಯ ಕ್ಷೇತ್ರಕ್ಕೆ
9ರಿಂದ 14 ವರ್ಷ ವಯೋಮಾನದ ಬಾಲಕಿಯವರಿಗೆ ಸರ್ವಿಕಲ್ ಕ್ಯಾನ್ಸರ್ ಲಸಿಕೆ ಹಾಕಿಸಿಕೊಳ್ಳಲು ಅಭಿಯಾನ
ಸಕ್ಷಮ್ ಅಂಗನವಾಡಿ ಮತ್ತು ಪೋಷಣ್ 2.0 ಮೂಲಕ ಎಳೆಕೂಸುಗಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಒದಗಿಸುವ ಯೋಜನೆ
ಲಸಿಕೆ ಒದಗಿಸುವ ಕಾರ್ಯಕ್ಕೆ ಯು-ವಿನ್ ಪ್ಲಾಟ್ಫಾರ್ಮ್ ಅಭಿವೃದ್ಧಿ
ಆಶಾ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕರನ್ನು ಆಯುಷ್ಮಾನ್ ಭಾರತ್ ಸ್ಕೀಮ್ ವ್ಯಾಪ್ತಿಗೆ ತರಲಾಗುವುದು.
ವಸತಿ ಯೋಜನೆಗಳು
ಪಿಎಂ ಆವಾಸ್ ಯೋಜನೆ ಅಡಿಯಲ್ಲಿ 3 ಕೋಟಿ ಮನೆಗಳನ್ನು ಕಟ್ಟುವ ಗುರಿಗೆ ಸಮೀಪ ಇದ್ದೇವೆ. ಮುಂದಿನ 5 ವರ್ಷದಲ್ಲಿ ಇನ್ನೂ 2 ಕೋಟಿ ಹೆಚ್ಚು ಮನೆಗಳ ಗುರಿ ಇಡಲಾಗಿದೆ.
ಮಧ್ಯಮ ವರ್ಗದವರು ತಮ್ಮದೇ ಸ್ವಂತ ಮನೆ ಹೊಂದುವ ಕನಸು ನನಸು ಮಾಡಿಕೊಳ್ಳಲು ಯೋಜನೆ.
ಪ್ರವಾಸೋದ್ಯಮ
ಲಕ್ಷದ್ವೀಪ್ ಸೇರಿದಂತೆ ವಿವಿಧ ದ್ವೀಪ ಪ್ರದೇಶಗಳಲ್ಲಿ ಪೋರ್ಟ್ ಕನೆಕ್ಟಿವಿಟಿ, ಟೂರಿಸಂ ಇನ್ಫ್ರಾಸ್ಟ್ರಕ್ಚರ್ ಯೋಜನೆ ಕೈಗೊಳ್ಳಲಾಗುವುದು.
ವಿವಿಧ ರಾಜ್ಯಗಳಿಗೆ ಪ್ರವಾಸೋದ್ಯ ಅಭಿವೃದ್ಧಿಪಡಿಸಲು ಬಡ್ಡಿರಹಿತ ಸಾಲಗಳನ್ನು ಒದಗಿಸಲಾಗುವುದು.
ಕೃಷಿ ಮತ್ತು ಆಹಾರ ಸಂಸ್ಕರಣೆ
ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿಯ ವೇಗವನ್ನು ಚುರುಕುಗೊಳಿಸಲಾಗುವುದು.
ಐದು ಸಮಗ್ರ ಆಕ್ವಾಪಾರ್ಕ್ಗಳನ್ನು ಸ್ಥಾಪಿಸಲಾಗುವುದು.
ಎಣ್ಣೆಬೀಜಗಳಲ್ಲಿ ಸ್ವಾವಲಂಬನೆ ಸಾಧಿಸಲು ಯೋಜನೆ
ಹಾಲು ಉತ್ಪನ್ನ ಅಭಿವೃದ್ಧಿಗೆ ಸಮಗ್ರ ಯೋಜನೆ