ಬೆಂಗಳೂರು: ಪ್ರತ್ಯೇಕ ರಾಷ್ಟ್ರದ ಹೇಳಿಕೆ ವಿಚಾರ ಸಂಬಂದಿಸಿದಂತೆ ಸಚಿವ HK ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಒಬ್ಬ ಮಂತ್ರಿಯಾಗಿ ಇಷ್ಟು ವರ್ಷ ರಾಜಕಾರಣದಲ್ಲಿ ಇರುವವನಾಗಿ ಯಾವುದೇ ರಾಜ್ಯಕ್ಕೆ ಗದ ಪ್ರಹಾರ ಮಾಡುವ ನೀತಿ ಖಂಡನೀಯ ಎಂದು ಕಿಡಿ ಕಾರಿದ್ದಾರೆ.
ಯಾವ ಕಾರಣಕ್ಕೆ ಕರ್ನಾಟಕಕ್ಕೆ ಇಷ್ಟು ಪ್ರಮಾಣದ ಕಡಿಮೆ ಹಣ ಕೊಡ್ತೀರಿ? ಬಿಡುಗಡೆ ಯಾವಾಗ ಮಾಡ್ತೀರಿ? ಇಷ್ಟು ದೊಡ್ಡ ಪ್ರಮಾಣದ ಬರ ಇದ್ದಾಗಲೂ ನಯಾ ಪೈಸೆ ಪರಿಹಾರ ಕೊಡಲಿಲ್ಲ ಇದು ಯಾವ ಧೋರಣೆ? ಒಕ್ಕೂಟ ವ್ಯವಸ್ಥೆಯಲ್ಲಿ ವಿಶ್ವಾಸ ಕುದುರಬೇಕೇ ಹೊರತು ವಿಶ್ವಾಸ ಕುಂದಬಾರದು ಎಂದರು.
ಎಲ್ಲಿ ಹೆಚ್ಚು ಶ್ರಮ ಇದೆ ಆ ರಾಜ್ಯಕ್ಕೆ ನ್ಯಾಯಯುತ ಪಾಲು ಸಿಗಬೇಕು ಆರ್ಥಿಕತೆಯ ವಿಚಾರದಲ್ಲೂ ರಾಜಕೀಯವೇ ಮಾಡುವುದಾದರೆ ಯಾವ ರೀತಿಯಿಂದ ರಾಜ್ಯಗಳ ವಿಶ್ವಾಸಾರ್ಹತೆ ಕುದುರಿಸಿಕೊಳ್ಳುತ್ತೀರಿ? ಎಂದು ಹೇಳಿದರು.