ಪೀಣ್ಯ ದಾಸರಹಳ್ಳಿ : ವಿದ್ಯಾರ್ಥಿಗಳು ಚೆನ್ನಾಗಿ ಓದಿ ಜೀವನದಲ್ಲಿ ಉತ್ತಮ ಭವಿಷ್ಯ ಕಂಡುಕೊಂಡು ಹೆತ್ತವರಿಗೆ ಹೆಸರು ತಂದು ಕೊಡುವ ಮಕ್ಕಳಾಗಬೇಕು. ಹಾಗೇ ಉತ್ತಮ ಪ್ರಜೆಗಳಾಗಬೇಕು ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ ಶಾಲೆಗೆ ಕೀರ್ತಿಯನ್ನು ತಂದುಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಶಾಸಕ ಎಸ್ ಮುನಿರಾಜು ತಿಳಿಸಿದರು.
ದಾಸರಹಳ್ಳಿ ಕ್ಷೇತ್ರದ ಭುವನೇಶ್ವರಿ ನಗರದ ಮಾಸ್ಟರ್ಸ್ ಪದವಿ ಪೂರ್ವಕಾಲೇಜು ಹಾಗೂ
ವಿಜಯ ಭಾರತಿ ಸ್ಕೂಲ್ ಕ್ಯಾಂಪಸ್ ನಲ್ಲಿ ಜಿಲ್ಲಾ ಮಟ್ಟದ ವಿಜ್ಞಾನ ಕಾರ್ಯಾಗಾರವನ್ನು ಉದ್ಘಾಟಿಸಿ ಬಳಿಕ ಮಾತಾನಡಿದರು.
ಶಾಲಾ ಕಾಲೇಜಿಗಳಲ್ಲಿ ವಿದ್ಯಾಭ್ಯಾಸ ಸಂಧರ್ಭದಲ್ಲಿ
ಬೇರೆ ಕಡೆ ಗಮನ ಹರಿಸದೇ ಉತ್ತಮ ಭವಿಷ್ಯ ರೂಪಿಸಿಕೊಂಡರೆ ಜೀವನದಲ್ಲಿ ನೆಮ್ಮದಿಯಾಗಿರಬಹುದು ಎಂದರು.
10 ನೇ ತರಗತಿಯಲ್ಲಿ ವಿಜ್ಞಾನ ಓದುತ್ತಿರುವ ವಿದ್ಯಾರ್ಥಿಗಳಿಗಾಗಿ ವಿಜ್ಞಾನ ವಿಷಯಕ್ಕೆ ಸಂಬಂಧ ಪಟ್ಟ ಎಲ್ಲಾ ಎನ್.ಸಿ.ಆರ್.ಟಿ. ಪುಸ್ತಕದಲ್ಲಿರುವ ಪ್ರಯೋಗಗಳನ್ನು ಮಕ್ಕಳಿಂದಲೇ ಮಾಡಿಸುವ ಕಾರ್ಯಾಗಾರವನ್ನು ನಿವೃತ್ತ ಶಿಕ್ಷಣಾಧಿಕಾರಿ,ಹಾಗು ಪ್ರಾಂಶುಪಾಲರಾದ ಟಿ ಎಂ ಪಾರ್ಥ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು.
ಪ್ರಾಂಶುಪಾಲ ಡಾ. ಕೆ ಎಸ್ ಮಲ್ಲಿಕಾರ್ಜುನ ಮಾತನಾಡಿ ದಾಸರಹಳ್ಳಿ ವಿಧಾನ ಸಭಾ ಕ್ಷೇತ್ರದ ಎಲ್ಲಾ ಪ್ರೌಢಶಾಲಾ ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಶಕ್ತವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ವಿಜಯಭಾರತಿ ಶಾಲೆಯ ಅಧ್ಯಕ್ಷರಾದ ಪ್ರೋಪೆಸರ್ ಬಿ.ವಿ ಸತ್ಯನಾರಾಯಣ ,ಶಿಕ್ಷಕ ವೃಂದ, ಆಡಳಿತಮಂಡಳಿ, ವಿದ್ಯಾರ್ಥಿಗಳು ಭಾಗವಹಿಸಿದ್ದರು.