ಗದಗ: ನ್ಯಾಯಮೂರ್ತಿ ಎಜೆ ಸದಾಶಿವ ವರದಿ ಜಾರಿಗೆ ಮುಂದಾಗಿರೋ ರಾಜ್ಯ ಸರ್ಕಾರದ ನಡೆಗೆ ಸದಾಶಿವ ಆಯೋಗ ವಿರೋಧಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.
ಬಂಜಾರ, ಕೊರಮ, ಕೊರಚ ಸಮುದಾಯನ್ನೊಳಗೊಂಡ ಸಮಿತಿ ಗದಗನಲ್ಲಿ ಸುದ್ದಿಗೋಷ್ಠಿ ನಡೆಸಿ ವರದಿ ಜಾರಿಗೋಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಿರೋ ರಾಜ್ಯ ಸರ್ಕಾರದ ನಡೆಯನ್ನ ಖಂಡಿಸಿದೆ.
ವರದಿ ಜಾರಿಗೆ ಮುಂದಾದ್ರೆ ಸಚಿವ ಸಂಪುಟದ ಎಲ್ಲ ಸದಸ್ಯರ ಮನೆಗೆ ಮುತ್ತಿಗೆ ಹಾಕುತ್ತೇವೆ ಎಂದು ವಿರೋಧಿ ಸಮಿತಿ ಸದಸ್ಯ ರವಿಕಾಂತ್ ಅಂಗಡಿ ಎಚ್ಚರಿಕೆ ನೀಡಿದ್ದಾರೆ. ಸದಾಶಿವ ಆಯೋಗದ ವರದಿ ದುರಹಂಕಾರದಿಂದ ಕೂಡಿದೆ. ಈ ವರದಿ ಸೋರಿಕೆಯಾಗಿದೆ. ದಲಿತ ಸಮುದಾಯದ ಒಳಗೆ ಪರಸ್ಪರ ದ್ವೇಷ ಬಿತ್ತುತ್ತಿರುವುದು ಒಂದು ಕಡೆಯಾದರೇ, ರಾಜಕೀಯ ಪಕ್ಷಗಳ ಒಡೆದು ಆಳುವ ನೀತಿಯಿಂದ ಬಂಜಾರ, ಭೋವಿ, ಕೊರಚ, ಕೊರಮ ಸೇರಿದಂತೆ ಪರಿಶಿಷ್ಟ ಜಾತಿಯ 101ಜಾತಿಗಳ ಜನಾಂಗಕ್ಕೆ ಅನ್ಯಾಯವಾಗಿದೆ.
ಹೀಗಾಗಿ ವರದಿ ಜಾರಿ ನಿರ್ಧಾರವನ್ನ ಕೂಡ್ಲೆ ಕೈ ಬಿಡ್ಬೇಕು ಇಲ್ಲವಾದಲ್ಲಿ ತೀವ್ರ ಹೋರಾಟದ ಹಾದಿ ಹಿಡಿಯಬೇಕಾಗುತ್ತೆ ಆಂತಾ ಅವ್ರು ಎಚ್ಚರಿಕೆ ನೀಡಿದ್ರು.