ಬೆಂಗಳೂರು: ಇಷ್ಟು ದಿನ ನಿಗಮ ಮಂಡಳಿ ಸ್ಥಾನ ಯಾರಿಗೆಲ್ಲಾ ಕೊಡೋದು ಅಂತಾ ಚರ್ಚೆ ಆಗುತ್ತಲೇ ಇತ್ತು. ನಿನ್ನೆ ಅಂದ್ರೆ ಸೋಮವಾರ ಪಟ್ಟಿ ರೆಡಿಮಾಡಿ ಹೆಸರನ್ನು ಘೋಷಿಸಿದ್ದಾರೆ.
ಹೌದು ಅದರಲ್ಲಿ ಸಚಿವರ ಆಪ್ತರಿಗೂ ಸೀಟು ದಕ್ಕಿದ್ದು ಹಾಗೆ ಸಿಎಂ ಕ್ಲೋಸ್ ಫ್ರೆಂಡ್ ಗೂ ನಿಗಮ ಭಾಗ್ಯ ದೊರಕಿದ್ದು ಸರೋವರ ಶ್ರೀನಿವಾಸ್ ಗೆ ನಿಗಮ ಭಾಗ್ಯ ನೀಡಿರೋ ಸಿಎಂ ಸಿದ್ದರಾಮಯ್ಯ.
ಸರೋವರ ಶ್ರೀನಿವಾಸ್ ಜೆಡಿಎಸ್ ಮಾಜಿ ಎಂಎಲ್ಸಿ ಸದ್ಯ ಸಿಎಂ ಪರಮಾಪ್ತ ಆಗಿದ್ದು ಹೀಗಾಗಿ ನಿಗಮ ಮಂಡಳಿಯಲ್ಲಿ ಸ್ಥಾನ ದೊರೆತಿದೆ.
ಸಿಎಂ ಸಿದ್ದರಾಮಯ್ಯ ನಡೆಗೆ ಪಕ್ಷದೊಳಗೆ ಭಾರಿ ಚರ್ಚೆ ನಡೆದಿದ್ದು ಸರೋವರ ಶ್ರೀನಿವಾಸರಿಂದ ಪಕ್ಷಕ್ಕೆ ಯಾವುದೇ ಕೊಡುಗೆ ಇಲ್ಲ ಪಕ್ಷಕ್ಕಾಗಿ ದುಡಿದಿಲ್ಲ ಸಂಘಟನೆಯನ್ನೂ ಮಾಡಿಲ್ಲ ಆದರೆ ಪರಮಾಪ್ತ ಎಂಬ ಒಂದೆ ಕಾರಣಕ್ಕೆ ನಿಗಮ ಭಾಗ್ಯ ಪಕ್ಷಕ್ಕಾಗಿ ರಾತ್ರಿ ಹಗಲು ದುಡಿದವರು ಲೆಕ್ಕಕ್ಕಿಲ್ಲ ಸಿಎಂ ನಡೆಗೆ ಪಕ್ಷದೊಳಗೆ ಅಸಮಾಧಾನದ ಮಾತು ಕೇಳಿ ಬರುತ್ತಿದೆ. ಇದರ ಬಗ್ಗೆ ಸಿಎಂ ಏನು ಹೇಳ್ತಾರೆ ಕೇಳಬೇಕಿದೆ.