ಬೆಂಗಳೂರು: ಸ್ಮಾರ್ಟ್ಫೋನ್ ಹೆಂಡತಿಗಿಂತ ಇಂಪಾರ್ಟೆಂಟಾ? ಸ್ಮಾರ್ಟ್ಫೋನ್ ಗರ್ಲ್’ಫ್ರೆಂಡ್’ಗಿಂತ ಇಂಪಾರ್ಟೆಂಟಾ? ಸ್ಮಾರ್ಟ್ಫೋನ್ ಪ್ರಾಣ ಕೊಡೋ ಗೆಳೆಯರಿಗಿಂತ ಇಂಪಾರ್ಟೆಂಟಾ? ಸ್ಮಾರ್ಟ್ಫೋನ್ ಜಾಬ್’ಗಿಂತ ಇಂಪಾರ್ಟೆಂಟಾ? ಹೌದು.. ಅಂತಾರೆ ಒಂದಿಷ್ಟು ಜನ.ಒಂದಿಷ್ಟು ಜನರಿಗೆಲ್ಲಾ ಮೊಬೈಲ್ ಸದಾ ಕೈಯಲ್ಲೇ ಇರಬೇಕು. ಒಂದು ಕ್ಷಣ ಇಲ್ಲ ಅಂದರೂ ಚಡಪಡಿಸಿಹೋಗುತ್ತಾರೆ. ಯಾರದೋ ಕಾಲ್.. ಯಾರದೋ ಮೆಸೇಜ್.. ಯಾರದೋ ವಾಟ್ಸಪ್. ಉಫ್, ಬೇಕೋ ಬೇಡವೋ ಮೊಬೈಲ್’ಗೆ ಮಿಡಿಯುತ್ತೆ ಮನ.
ಇತ್ತೀಚಿನ ದಿನಗಳಲ್ಲಿ ಸಿಕ್ಕಾಪಟ್ಟೆ ಮೊಬೈಲ್ (Mobile) ಬಳಕೆ ಹೆಚ್ಚಾಗಿದೆ. ಯಾವುದೇ ಟೈಮ್ ಇಲ್ಲದೆ ಏನು ಕೆಲಸ ಅಂತಾ ತಿಳಿಯದೇ ಮೊಬೈಲ್ ನೋಡೊವರ ಸಂಖ್ಯೆ ಹೆಚ್ಚಾಗ್ತಿದೆ. ಬಸ್ಗೆ ಕಾಯುವಾಗ, ರಸ್ತೆ ದಾಟುವಾಗ ಹೀಗೆ ನಿರಂತರ ಮೊಬೈಲ್ ಬಳಕೆ ರಸ್ತೆ ಅಪಘಾತಕ್ಕೆ (Road Accident) ಕಾಣವಾಗ್ತೀದೆ. ಬೆಂಗಳೂರಿನಲ್ಲಿ ನಿತ್ಯ ಲಕ್ಷಂತಾರ ವಾಹನಗಳು ಸಂಚಾರ ಮಾಡ್ತೀದ್ದು ಹತ್ತಾರೂ ಅಪಘಾತಗಳು ಸಂಭವಿಸ್ತಾನೆ ಇರುತ್ತೆ. ಆದರೆ ಈ ಅಘಾತಗಳಿಗೆ ಅತಿಯಾದ ಮೊಬೈಲ್ ಬಳಕೆಯೂ ಕಾರಣವಾಗಿದೆ. ಸ್ಮಾರ್ಟ್ಫೋನ್ ಜೋಂಬಿಸ್ ಗೀಳು ಪಾದಚಾರಿಗಳ ಜೀವಕ್ಕೆ ಕುತ್ತು ತರ್ತಿದೆ ಎಂಬ ಬಗ್ಗೆ ವರದಿಯೊಂದರ ಮೂಲಕ ತಿಳಿದು ಬಂದಿದೆ.
ಸಿಲಿಕಾನ್ ಸಿಟಿಯಲ್ಲಿ ವಾಹನಗಳ ಅಪಘಾತಕ್ಕಿಂತ ಇತ್ತೀಚೆಗೆ ಪಾದಚಾರಿಗಳ ಸಾವಿನ ಪ್ರಕರಣ ಹೆಚ್ಚಾಗಿದೆ. ಕಳೆದ ವರ್ಷ ಒಂದಲ್ಲ ಎರಡಲ್ಲ ಸುಮಾರು 240 ಕ್ಕೂ ಹೆಚ್ಚು ಪಾದಚಾರಿಗಳು ಸಾವನ್ನಪ್ಪಿದ್ದಾರೆ. ಈ ಬಗ್ಗೆ ಸ್ವತಃ ಸಂಚಾರಿ ಪೊಲೀಸ್ ಇಲಾಖೆಯೇ ಅಂಕಿ ಅಂಶವನ್ನು ನೀಡಿದ್ದು ಇದಕ್ಕೆ ಕಾರಣ ಏನು ಅಂತ ನೋಡಿದಾಗ ಸ್ಮಾರ್ಟ್ಪೋನ್ ಬಳಕೆ ಅನ್ನೋದು ಗೊತ್ತಾಗಿದೆ. ಜನರು ಮೊಬೈಲ್ ಸ್ಕ್ರಾಲಿಂಗ್ ಮಾಡಿಕೊಂಡು ಅಥವಾ ಬೇರೆ ಕರೆಯಲ್ಲಿ ಬ್ಯುಸಿಯಾಗಿ ತಮ್ಮದೇ ಲೋಕದಲ್ಲಿ ಇರ್ತಾರೆ.
ಇನ್ನು ಈ ಅತಿಯಾದ ಮೊಬೈಲ್ ಬಳಕೆ ಜೊಂಬಿಸ್ ಗೀಳಾಗಿ ಜನರನ್ನ ಕಾಡ್ತಿದೆ. ಜನರು ಸಂಚಾರ ಮಾಡುವಾಗ ಇತರೆ ಕೆಲಸ ಮಾಡುವಾಗಲೂ ನಿರಂತರವಾಗಿ ಮೊಬೈಲ್ ಗೆ ಹೊಂದಿಕೊಂಡಿರುತ್ತಾರೆ. ಮೊಬೈಲ್ ಮಾಯೆಗೆ ಬಲಿಯಾಗುತ್ತಿದ್ದಾರೆ. ಮಾಡುವ ಕೆಲಸದ ಬಗ್ಗೆ ಅರಿವೇ ಇಲ್ಲದೆ ಚಟ್ಟಕ್ಕೆ ಏರುತ್ತಿದ್ದಾರೆ. ಮೊಬೈಲ್ ಫೋನ್ ಅಡಿಕ್ಷನ್ನಿಂದ ಕೆಲವರು ಹೊರಗೆ ಬರ್ತಿಲ್ಲ. ಇದು ಮಾನಸಿಕ ಆರೋಗ್ಯದ ಮೇಲೂ ಪರಿಣಾಮ ಬೀರ್ತಿದ್ದು, ಸರ್ಕಾರ ಕೇವಲ ಬೈಕ್ ನಲ್ಲಿ ಸಂಚಾರದ ವೇಳೆಯಷ್ಟೇ ಮೊಬೈಲ್ ಬಳಕೆ ನಿಷೇಧ ಮಾಡಿದ್ರೆ ಸಾಲೋದಿಲ್ಲ. ರಸ್ತೆಯ ಸಂಚಾರ ಮಾಡುವ ಪಾದಚಾರಿಗಳು ಮೊಬೈಲ್ ಬಳಕೆಯಿಂದ ದೂರ ಇರುವುದು ಉತ್ತಮ ಅಂತ ತಜ್ಞರು ವೈದ್ಯರು ಎಚ್ಚರಿಕೆ ನೀಡುತ್ತಿದ್ದಾರೆ.