ಕೋಲಾರ: ಕೊಲೆ ಪ್ರಕರಣ , ಹಾಗೂ ಅಫಘಾತಗಳು ಹೆಚ್ಚಾಗಲು ಅಬಕಾರಿ ಇಲಾಖೆ ಕಾರಣ ಎಂದು ಆರೋಪಿಸಿ ನಚಿಕೇತನ ನಿಲಯದಿಂದ ಅಬಕಾರಿ ಕಚೇರಿ ವರೆಗೂ ಅಂಬೇಡ್ಕರ್ ಸ್ವಾಬಿಮಾನಿ ಬಳಗ ವತಿಯಿಂದ ಪಾದಯಾತ್ರೆ ಮಾಡಲಾಯಿತು. ಬಾರ್ ಗಳು ನಿಯಮಗಳನ್ನು ಗಾಳಿಗೆ ತೂರಿ ಅಕ್ರಮವಾಗಿ ಮದ್ಯ ಮಾರಾಟದ ಆರೋಪವಾಗಿದ್ದು, ತಮಟೆ ಚಳುವಳಿ ಮೂಲಕ ಅಬಕಾರಿ ಅಧಿಕಾರಿಗಳ ವಿರುದ್ದ ಘೋಷಣೆಗಳನ್ನೂ ಕೂಗಿ ಅಂಬೇಡ್ಕರ್ ಬಾವಚಿತ್ರಕ್ಕೆ ನಮನ ಸಲ್ಲಿಸಿ ದರಣಿ ಕುಳಿತರು.
ಬಾರ್ ಗಳ ಮೇಲೆ ಅಧಿಕಾರಿಗಳು ನಿಯಂತ್ರಣ ಸಾದಿಸಲು, ಅಕ್ರಮ ಮಾರಟಕ್ಕೆ ಕಡಿವಾಣ ಹಾಕಿ ಜನರನ್ನು ರಕ್ಷಿಸಬೇಕು. ಸಿಎಲ್ 2 ಹಾಗೂ ಸಿ ಎಲ್ 7 ಬಾರ್ ಲೈಸೆನ್ಸ್ ದುರುಪಯೋಗ ನಿಲ್ಲಿಸಬೇಕು, ಡಾಬಾಗಳಲ್ಲಿ ಅಕ್ರಮ ಮದ್ಯ ಮಾರಾಟ , ದಾಸ್ತಾನು ಮಾಡುವವರ ಮೇಲೆ ಕ್ರಮಕ್ಕೆ ಅಂಬೇಡ್ಕರ್ ಸ್ವಾಬಿಮಾನಿ ಬಳಗ ಅದ್ಯಕ್ಷ ಮಂಜುನಾಥ್, ಯುವ ಶಕ್ತಿ ಸುಭ್ಬರಾಜು ನೇತೃತ್ವದಲ್ಲಿ ಆಗ್ರಹಿಸಿದ್ದಾರೆ.