ಸುರಪುರ: ನಗರದ ತಹಶೀಲ್ದಾರ್ ಕಚೇರಿಯಲ್ಲಿ ಯಾವುದೇ ಕಡೆತಗಳು ಸಹಿ ಆಗಬೇಕಾದರೆ ಅಥವಾ ಪಹಣಿ ತಿದ್ದುಪಡಿ ಮತ್ತಿತರ ಯಾವುದೇ ಕೆಲಸಗಳಾದರೆ ಹಣ ಕೊಡದೆ ಯಾವುದೇ ಕಾರ್ಯಗಳು ಆಗುವುದಿಲ್ಲ. ಇದರಿಂದಾಗಿ ಜನರು ಹಣ ಕೊಟ್ಟು ಕೆಲಸ ಮಾಡಿಸಿಕೊಳ್ಳುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದಕ್ಕೆ ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ. ತಾಲೂಕು ಕಚೇರಿಯಲ್ಲಿ ರೈತರ ಜಮೀನುಗಳ ಕಡತಗಳ ತಿದ್ದುಪಡಿ, ಪಹಣಿ, ಆಧಾರ್, ಜಾತಿ ಪ್ರಮಾಣ ಪತ್ರ, ರೆಕಾರ್ಡ್ ಯಾವುದೇ ತರಹದ ಕೆಲಸಗಳನ್ನು ಮಾಡಿಕೊಡಬೇಕಾದರೆ ಹಣ ಹಣ ಕೊಡಬೇಕಾಗಿದೆ.
ಸರ್ಕಾರಿ ನೌಕರರು ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಹಣ ವಸಲಿ ದಂಧೆಗೆ ಮುಂದಾಗುತ್ತಿದ್ದಾರೆ. ಯಾವುದೇ ಕೆಲಸಕ್ಕೂ ಕೂಡ ಸರ್ಕಾರಿ ನೌಕರರ ಮುಂದೆ ಬರದೆ ತಮಗೆ ಬೇಕಾದಂತಹ ಆಪ್ತ ಖಾಸಗಿ ವ್ಯಕ್ತಿಗಳನ್ನು ಇಟ್ಟುಕೊಂಡು ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದಾರೆ. ಯಾವುದೇ ಒಂದು ಕೆಲಸವನ್ನು ಮಾಡಿಕೊಳ್ಳಬೇಕಾದರೆ ಇಂತಿಷ್ಟು ನಿಗದಿ ಮಾಡಿ ವಸೂಲಿ ತ ನೀವು ಮಾಡಿಕೊಂಡು ಬರಲೇಬೇಕೆಂದು ಖಾಸಗಿ ವ್ಯಕ್ತಿಗಳಿಗೆ ಸರ್ಕಾರಿ ನೌಕರರು ತಾಕೀತು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತದೆ.
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಆವಳಿ ಹೆಚ್ಚಾಗಿದ್ದು, ಆರಂಭದ ಶೂರತ್ವ ಎಂಬಂತೆ ತಹಸಿಲ್ದಾರ್ ರವರು ಮಧ್ಯವರ್ತಿಗಳ ಎಡಮುರಿ ಕಟ್ಟುವುದಾಗಿ ಹೇಳಿದ್ದರು. ಆದರೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿರುವುದರಿಂದ ಕೈಕಟ್ಟಿ ಕುಳಿತಿದ್ದಾರೆ ಎಂದು ಆಕ್ರೋಶ ವ್ಯಕ್ತವಾಗಿದೆ. ತಾಲೂಕು ಆಡಳಿತದಲ್ಲಿ ನಡೆಯುತ್ತಿರುವಂತಹ ಲಂಚ ಅವತಾರಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತವಾದ ಸರ್ಕಾರಿ ನೌಕರರ ವಿರುದ್ಧ ಕ್ರಮ ಕೈಗೊಳ್ಳುವರೇ ಎಂದೂ ಕಾಯ್ದು ನೋಡಬೇಕಾಗಿದೆ.