ಬಳ್ಳಾರಿ: ಸಾಂಸ್ಕøತಿಕ ರಾಜಧಾನಿ ಎಂದು ಕರೆಯುವ ಮೈಸೂರು ಅರಸರ ನಾಡಿನಲ್ಲಿರುವ ಮಂಡ್ಯ ಜಿಲ್ಲೆಯ ಕೆರಗೋಡು ಗ್ರಾಮದಲ್ಲಿ ಹನುಮ ಧ್ವಜಸ್ತಂಭ ತೆರವುಗೊಳಿಸಿದ್ದನ್ನು ವಿರೋಧಿಸಿ, ಬಂಡೆ ಬಾಲದ ಹನುಮಪ್ಪ ನಾಯಕನ ತವರೂರು ಬಳ್ಳಾರಿಯಲ್ಲಿ ಬಿಜೆಪಿಗರು ಉಗ್ರ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಬಿಜೆಪಿಯ ನೂತನ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಮೋಕಾ ಅವರ ನೇತೃತ್ವದಲ್ಲಿ ಬೆಳಿಗ್ಗೆ 11:30 ಗಂಟೆಗೆ ಬಿಜೆಪಿ ಕಚೇರಿಯಿಂದ ಹೊರಟ ಕಾರ್ಯಕರ್ತರು ರಾಜ್ಯ ಸರ್ಕಾರದ ಹಿಂದೂ ವಿರೋಧಿ ನೀತಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿ, ಘೋಷಣೆಗಳನ್ನು ಕೂಗಿದರು. ಬಳಿಕ ನಗರದ ಹೃದಯಭಾಗವಾದ ರಾಯಲ್ ಸರ್ಕಲ್ನಲ್ಲಿ ಜಮಾಯಿಸಿದ ಬಿಜೆಪಿಯ ಮುಖಂಡರು,
ಕಾರ್ಯಕರ್ತರು ಮತ್ತು ಪ್ರತಿಭಟನಾ ನಿರತರು ಕೆಲಹೊತ್ತು ರಸ್ತೆ ಬಂದ್ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಂಡ್ಯದ ಕೆರಗೋಡುನಲ್ಲಿ ನಡೆದ ಹನುಮಾನ್ ಧ್ವಜವನ್ನು ಇಳಿಸಿದ ದುಷ್ಟ, ಭ್ರಷ್ಟ, ತುಘಲಕ್ ಕಾಂಗ್ರೆಸ್ ವಿರುದ್ಧ ಅತ್ಯಂತ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅನಿಲ್ ಕುಮಾರ್ ಮೋಕಾ ತಿಳಿಸಿದರು. ಇದೇವೇಳೆ ಮಾನವ ಸರಪಳಿ ನಿರ್ಮಿಸಿ ಕಾಂಗ್ರೆಸ್ ವಿರುದ್ಧ ಘೋಷಣೆಗಳನ್ನು ಕೂಗಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಸರ್ಕಾರದ ಹಿಂದೂ ವಿರೋಧಿ ನೀತಿಯನ್ನು ಬಲವಾಗಿ ಖಂಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮತ್ತು ಕಾಂಗ್ರೆಸ್ನ ಕೆಲ ವಿಕ್ಷಿಪ್ತ ಮನಃಸ್ಥಿತಿಯ ಕಾಂಗ್ರೆಸ್ ಮುಖಂಡರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ಅನಿಲ್ ಕುಮಾರ್ ಮೋಕಾ ಅವರು, ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದೇರೀತಿ, ಹಿಂದೂ ವಿರೋಧಿ ನೀತಿ ಮುಂದುವರಿಸಿದರೆ, ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಸಿದರೆ ತಮ್ಮ ಪಕ್ಷ ಸುಮ್ಮನಿರುವುದಿಲ್ಲ.
Home Loan: ನೀವು ಮನೆ ಖರೀದಿಗೆ ಯೋಚಿಸುತ್ತಿದ್ದೀರಾ.? ಈ ಬ್ಯಾಂಕ್ʼಗಳಲ್ಲಿ ಸಿಗುತ್ತೆ ಕಡಿಮೆ ಬಡ್ಡಿಗೆ ಗೃಹ ಸಾಲ..!
ಹಿಂದೂ ದೇವಾಲಯಗಳ ಆಚಾರ, ವಿಚಾರಗಳ ಬಗ್ಗೆ ಅಪಚಾರ ಮಾಡಲು ಹೊರಟಿರುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ಜನರು ತಕ್ಕ ಶಾಸ್ತಿ ಮಾಡಲಿದ್ದಾರೆ. ಕಾಂಗ್ರೆಸ್ ಪಕ್ಷ ಕಳೆದ ಸ್ವಾತಂತ್ರ್ಯಾ ನಂತರದ ದಿನಗಳಿಂದಲೂ ಒಂದು ಧರ್ಮವನ್ನು ಓಲೈಸುತ್ತಾ ಹಿಂದೂಗಳನ್ನು ಎಲ್ಲ ರೀತಿಯಲ್ಲೂ ಮುಗಿಸುವ ಷಡ್ಯಂತ್ರ ನಡೆಸುತ್ತಾ ಬರುತ್ತಿದೆ. ಹಿಂದೂಗಳ ದೇವಾಲಯಗಳು ಮತ್ತು ಹಿಂದುತ್ವದ ದಮನ ಮಾಡುತ್ತಾ ಬರುತ್ತಿದೆ. ಜನರು ಪ್ರಜ್ಞಾವಂತರಿದ್ದಾರೆ. ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರೇ ಸಿಡಿದೆದ್ದು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕದ ಅಧ್ಯಕ್ಷರಾದ ಕೆ.ವೆಂಕಟೇಶ್ವರ, ರಾಜ್ಯ ಹಾಗೂ ಜಿಲ್ಲಾ ಮೋರ್ಚಾ ಪದಾಧಿಕಾರಿಗಳಾದ ನೂರ್ ಬಾಷಾ, ಶಿವಾ ಕೃಷ್ಣ, ಸಾಧನಾ ಹಿರೇಮಠ, ಪುಷ್ಪಾ ಚಂದ್ರಶೇಖರ್, ಸುಗುಣ, ಅಲವೇಲು, ಚುನಾಯಿತ ಜನಪ್ರತಿನಿಧಿಗಳಾದ ಶ್ರೀನಿವಾಸ್ ಮೋತ್ಕರ್, ಸಿಎಂ ಇಬ್ರಾಹಿಂ ಬಾಬು, ಹಿರಿಯ ಮುಖಂಡರಾದ ಐನಾಥ್ ರೆಡ್ಡಿ, ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಪದಾಧಿಕಾರಿಗಳು, ಮಂಡಲದ ಪದಾಧಿಕಾರಿಗಳು, ಕೆ.ರಾಮಾಂಜಿ, ಕರೂರು ಸುಧಾಕರ್ ರೆಡ್ಡಿ, ಶ್ರೀನಿವಾಸ್, ಬಹುಸಂಖ್ಯಾತ ಕಾರ್ಯಕರ್ತರು, ಮುಖಂಡರು, ಮಹಿಳಾ ಮುಖಂಡರು, ಕಾರ್ಯಕರ್ತರೆಲ್ಲ ಸೇರಿ ಪ್ರತಿಭಟನೆಯನ್ನು ಅತ್ಯಂತ ಬೃಹತ್ ಪ್ರಮಾಣದಲ್ಲಿ ಯಶಸ್ವಿಗೊಳಿಸಿದರು.