ಬಳ್ಳಾರಿ: ಬಳ್ಳಾರಿಯಲ್ಲಿ ಸಾಲ ವಸೂಲಾತಿ ಪದ್ಧತಿ ಖಂಡಿಸಿ ರೈತರಿಂದ ಸಂಕಲ್ಪ ಯಾತ್ರೆ ನಡೆಸಲಾಯಿತು. ಸಾಲ ಕಟ್ಟದ ರೈತರ ಮೇಲೆ ಕೇಸ್ ದಾಖಲಿಸಲು ಕೇಂದ್ರ ಸಚಿವರ ಹೇಳಿಕೆಗೆ ರೈತರು ಗರಂ ಆಗಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್’ನಿಂದ ಆಗುತ್ತಿರುವ ಅನ್ಯಾಯ ಖಂಡಿಸಿ ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾಲದ ಮೊತ್ತಕ್ಕಿಂದ 4 ಪಟ್ಟು ಹೆಚ್ಚು ಹಣವನ್ನು ಪಾವತಿಸುವಂತೆ ಬ್ಯಾಂಕ್’ನಿಂದ ರೈತರಿಗೆ ನೋಟೀಸ್ ನೀಡಲಾಗಿದೆ.
ಅನ್ನ ನೀಡುವ ರೈತರ ಮೇಲೆ ದಾವೆ ಹೂಡವ ಸರ್ಕಾರದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಉದ್ಯಮಿದಾರರಿಗೆ ಸಾಲ ಮನ್ನಾ ಮಾಡಿದಂತೆ ರೈತರ ಸಾಲ ಮನ್ನಾ ಮಾಡಲು ನೀತಿ ರೂಪಿಸಲು ರೈತರು ಒತ್ತಾಯ ಮಾಡಿದ್ದು, ಕರ್ನಾಟಕ ಗ್ರಾಮೀಣ ಬ್ಯಾಂಕ್ ಅವೈಜ್ಞಾನಿಕ ಸಾಲ ವಸೂಲಾತಿ ನೀತಿಯನ್ನು ಅನುಸರಿಸಿದೆ, ಈ ನಿಟ್ಟಿನಲ್ಲಿ ರಾಜ್ಯಾದ್ಯಂತ ರೈತ ಸಂಕಲ್ಪ ಯಾತ್ರೆ ರೈರು ಕೈಗೊಂಡಿದ್ದಾರೆ.