ಕಂಪ್ಲಿ : ಜ 25 ಡಾ| ಬಿ.ಆರ್. ಅಂಬೇಡ್ಕರ್ ಮೂರ್ತಿಗೆ ಅಪಮಾನಿಸಿ ಬಂಧನಕ್ಕೊಳಗಾದ ದುಷ್ಕರ್ಮಿಗಳಿಗೆ ಕಾನೂನು ರೀತಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ವಿದ್ಯಾರ್ಥಿ ಘಟಕ ಮುಂದಾಳತ್ವದಲ್ಲಿ ತಾಲೂಕಿನ ವಿವಿಧ ಪ್ರಗತಿಪರ ಸಂಘಟಕರಿಂದ ಕರ್ನಾಟಕ ರಾಜ್ಯ ಗೃಹ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ತಹಶೀಲ್ದಾರ್ ಶಿವರಾಜ್ ಮೂಲಕ ಗುರುವಾರ ಸಲ್ಲಿಸಲಾಯಿತು.
ಈ ಕುರಿತು ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಜಿಲ್ಲಾಧ್ಯಕ್ಷ ರವಿ ಮಣ್ಣೂರ್ ಮಾತನಾಡಿ ದಿನಾಂಕ 22.01.2024 ರಂದು ರಾತ್ರಿ ಸಮಯದಲ್ಲಿ ಕಲಬುರಗಿ ನಗರ ಕೋಟ್ಟೂರು ಡಿ. ಬಡಾವಣೆಯಲ್ಲಿ ಸ್ಥಾಪಿತವಾಗಿರುವ ಸಂವಿಧಾನ ಶಿಲ್ಪಿ ಡಾ| ಬಿ.ಆರ್.ಅಂಬೇಡ್ಕರ್ ರವರ ಮೂರ್ತಿಗೆ ಕಿಡಿಗೇಡಿಗಳು ಗುಂಪು ಕೂಡಿಕೊಂಡು ಅಂಬೇಡ್ಕರ್ ಮೂರ್ತಿಗೆ ಅಪಮಾನಗೊಳಿಸಿ ಬಂಧನಕ್ಕೊಳಗಾಗಿದ್ದಾರೆ ಇಂತಹ ಕಿಡಿಗೇಡಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕೆಂದರು.
ಪ್ರಗತಿಪರ ಸಂಘಟಕರಾದ ಕೆ ಲಕ್ಷ್ಮಣ, ವಸಂತ್ ರಾಜ್ ಕಹಳೆ ಮಾತನಾಡಿ ಎಲ್ಲಾ ಜಾತಿ, ಧರ್ಮವಂತಗಳಿಗೆ ತಾರತಮ್ಯ ಮಾಡದೇ ಭಾರತ ದೇಶದಲ್ಲಿ ಎಲ್ಲಾರು ಸಮಾನತ ಸ್ವತಂತ್ರ ಸ್ವಾಭೀಮಾನದಿಂದ ಬದುಕಲು ಸಂವಿಧಾನ ರೂಪಿಸಿಕೊಟ್ಟಿರುವಂತಹ ವಿಶ್ವದ ಮಹಾ ನಾಯಕನಿಗೆ ಇತರ ಆಗಿರುವುದು ಖಂಡನೀಯ
ಮುಂದೆ ಈ ರೀತಿ ಅವಮಾನ ಮಾಡಲು ಮುಂದಾಗುವ ವ್ಯಕ್ತಿಗಳಿಗೆ ಇದೊಂದು ಎಚ್ಚರಿಕೆ ಗಂಟೆಯಾಗಬೇಕು
ಒಂದು ವೇಳೆ ಕಿಡಿಗೇಡಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳದೆ ಇದ್ದಲ್ಲಿ ಭೀಮ್ ಆರ್ಮಿ ಭಾರತ್ ಏಕತ್ ಮಿಷನ್ ವಿದ್ಯಾರ್ಥಿ ಘಟಕದ ವತಿಯಿಂದ ಕರ್ನಾಟಕ ರಾಜ್ಯಾದ್ಯಂತ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುದೆಂದರು.
ಈ ಸಂದರ್ಭದಲ್ಲಿ ಭೀಮ್ ಆರ್ಮಿ ವಿದ್ಯಾರ್ಥಿ ಘಟಕದ ಕಂಪ್ಲಿ ತಾಲೂಕು ಅಧ್ಯಕ್ಷ ಸಣ್ಣೆಪ್ಪ ತಳವಾರ್, ಉಪಾಧ್ಯಕ್ಷ ರಾಮಪ್ಪ ರಾಮಸಾಗರ, ಪ್ರಗತಿಪರ ಸಂಘಟನೆಗಳ ಮುಖಂಡರುಗಳಾದ ಕರ್ನಾಟಕ ಜನಶಕ್ತಿ ವಸಂತ ರಾಜ್ ಕಹಳೆ, ಅಸ್ಪೃಶ್ಯ ವಿಮೋಚನ ಸಮಿತಿ ರಾಜ್ಯ ಉಪಾಧ್ಯಕ್ಷ ಕೆ ಲಕ್ಷ್ಮಣ, ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಬಳ್ಳಾರಿ ಜಿಲ್ಲಾಧ್ಯಕ್ಷ ಟಿ ಎಚ್ ಎಂ ರಾಜಕುಮಾರ್, ಡಿಎಸ್ಎಸ್ ಪ್ರೊಪೋಷರ್ ಕೃಷ್ಣಪ್ಪ ಬಣದ ಕಂಪ್ಲಿ ತಾಲೂಕು ಅಧ್ಯಕ್ಷ ಮರಿಯಪ್ಪ ಸಣಾಪುರ, ದನಕಾಯೋ ಬಸವರಾಜ್, ರುದ್ರಪ್ಪ, ಎಲ್ ಲಕ್ಷ್ಮಿ, ನೀಲಪ್ಪ ಪೈಂಟರ್, ಸಿ.ಮುತ್ತುಣ್ಣ ಸಣಾಪುರ, ಎ ಹುಸೇನಿ ಸೇರಿ ಇನ್ನಿತರರು ಇದ್ದರು.