ಬೆಂಗಳೂರು: ಬಿಡಿಎ ಅಂದ್ರೆ ಬೋಗಸ್,ಬಂಡಲ್ ಅಂತ ಜನ ಉಗಿಯುತ್ತಿರ್ತಾರೆ.ಈಗೇ ಇದ್ರೂ ಅಧಿಕಾರಿಗಳು ಕೊಡೋ ಬಿಲ್ಡಪ್ ಮಾತ್ರ ಬೀಡ್ತಿಲ್ಲ.ಇರೋ ಲೇಔಟ್ಗಳನ್ನ ನೆಟ್ಟಿಗೆ ಮಾಡೋಕೆ ಆಗ್ತಿಲ್ಲ.ಹೀಗಿರುವಾಗ ಮತ್ತಷ್ಟು ಹೊಸ ಲೇಔಟ್ ಗಳನ್ನ ಮಾಡ್ತೀವಿ ಅಂತ ಬಿಡಿಎ ಅಧಿಕಾರಿಗಳು ಹೊರಟಿದ್ದಾರೆ.ಆದ್ರೆ ಇತ್ತ ರೈತರು ಮಾತ್ರ ಪ್ರಾಣ ಕೊಟ್ಟೇವೋ ಬಿಡಿಎಗೆ ಜಾಗ ಬಿಡೋದಿಲ್ಲ ಅಂತ ಹೇಳಿದ್ರೂ ಅದೇ ಲೇಔಟ್ ಮೇಲೆ ಬಿಡಿಎ ಕಣ್ಣು ಬಿದ್ದಿದೆ. .
ಬಿಡಿಎ. ಇದು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ.ಬೆಂಗಳೂರು ನಗರದಲ್ಲಿ ಲೇಔಟ್ ಗಳನ್ನು ಮಾಡೋದು ಫ್ಲಾಟ್ ಗಳನ್ನ ಕಟ್ಟಿ ಬಡವರಿಗೆ ರಿಯಾಯಿತಿ ದರದಲ್ಲಿ ನೀಡೋದು ಇದರ ಕೆಲಸ. ಆದ್ರೆ ದಿನಕಳೆಂದೆ ಬಿಡಿಎ ಪ್ಲಾಟ್ ಹಾಗೂ ಬಡಾವಣೆಗಳನ್ನ ಸರಿಯಾಗಿ ನಿರ್ಮಾಣ ಮಾಡ್ತಿಲ್ಲ. ನಿರ್ಮಾಣ ಮಾಡಿರೋ ಲೇಔಟ್ ಹಾಗೂ ಫ್ಲಾಟ್ಗ ಗಳಿಗೆ ಮೂಲಭೂತ ಸೌಕರ್ಯ ಕಲ್ಪಿಸುವ ಯೋಗ್ಯತೆ ಇಲ್ಲ. ಹೀಗಾಗಿ ಜನ ಬಿಡಿಎ ಅಧಿಕಾಇರಿಗಳು ಥೂ ಅಂತ ಉಗಿಯುತ್ತಿದ್ದಾರೆ. ಈ ನಡುವೆ ಹೊಸ ಲೇಔಟ್ ಗಳ ಮಾಡೋಕೆ ಬಿಡಿಎ ಹೊರಟಿದೆ.
ಹೌದು.. ಹೌದು..ಈಗಾಗಲೇ ಡಾ.ಶಿವರಾಮ ಕಾರಂತ ಬಡಾವಣೆಯನ್ನ ನಿರ್ಮಾಣ ಮಾಡೋಕೆ ಒದ್ದಾಡ್ತಿರೋ ಬಿಡಿಎಗೆ, ಭೂ ದಾಹ ಕಮ್ಮಿಯಾದಂತೆ ಕಾಣ್ತಿಲ್ಲ..ಯಾಕೆಂದರೆ ಮತ್ತೆ ಭೂಸ್ವಾಧೀನಪಡಿಸಿಕೊಳ್ಳಕ್ಕೆ ಮುಂದಾಗಿದೆ.ಶಿವರಾಮ ಕಾರಂತ ಮುಂದುವರೆದ ಲೇಔಟ್ ನಿರ್ಮಾಣ ಮಾಡಲು ಪ್ಲಾನ್ ರೂಪಿಸಿದೆ..ಸುಮಾರು 2095 ಎಕರೆ ಪ್ರದೇಶ ಭೂಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ..ಈ ಬಗ್ಗೆ ಬಿಡಿಎ ತೀರ್ಮಾನ ಮಾಡಲಾಗಿದ್ದು,ಸರ್ಕಾರಕ್ಕೆ ಗ್ರೀನ್ ಸಿಗ್ನಲ್ ನೀಡಿದೆ. ಹೊಸ ಲೇಔಟ್ ನಿರ್ಮಾಣಕ್ಕೆ ಡಿಸಿಎಂ ಡಿಕೆಸಿ ಸಹ ಒಪ್ಪಿಗೆ ನೀಡಿದ್ದಾರೆ.
ಶಿವಕಾರಂತ ಬಡಾವಣೆಗೆ ಅಂತ ಈಗಾಗಲೇ 3567 ಎಕರೆಯನ್ನ ಭಾಗವನ್ನು ಅಂತಿಮ ಅಧಿಸೂಚನೆ ಹೊರಡಿಸಿದೆ.ಸುಪ್ರೀಂ ಕೋರ್ಟ್ ಕೂಡಲೇ ಶಿವಕಾರಂತ ಬಡಾವಣೆ ನಿರ್ಮಿಸಿ ಅಂತ ಹೇಳಿದ್ರೂ ಲೇಔಟ್ ನಿರ್ಮಾಣ ಮಾಡೋಕೆ ಆಗ್ತಿಲ್ಲ.ಆದ್ರೂ ಇದೀಗ ಮತ್ತೆ ಶಿವರಾಮ ಕಾರಂತ ಮುಂದುವರೆದ ಬಡಾವಣೆ ಮಾಡೋಕೆ ಹೊರಟಿದೆ..ಈ ಬಡಾವಣೆಗೆ ಯಲಹಂಕ ಬಳಿಯ ಆವಲಹಳ್ಳಿ,ಜಾರಕಬಂಡೆ,ಲಿಂಗರಾಜಪುರ,ದೊಡ್ಡಬೆಳ್ಳಕೆರೆ,ಕೆಂಪಾಪುರ.ಚಿಕ್ಕಬಾಣವಾರ,ಸೋಲದೇವನಹಳ್ಳಿ,ಸೇರಿದಂತೆ 13 ಗ್ರಾಮಗಳಲ್ಲಿ 2095 ಎಕರೆ ಜಾಗವನ್ನ ಭೂಸ್ವಾಧೀನಕ್ಕೆ ಪ್ಲಾನ್ ರೂಪಿಸಲಾಗಿದೆ.. ಆದ್ರೆ ಬಿಡಿಎ ನಿರ್ಮಾಣ ಮಾಡಲು ಹೊರಟಿರುವ ಶಿವರಾಮ ಕಾರಂತ ಮುಂದುವರೆದ ಬಡಾವಣೆಗೆ 13 ,ಗ್ರಾಮದ ರೈತರು ಭಾರಿ ವಿರೋಧ ವ್ಯಕ್ತಪಡಿಸುತ್ತಾರೆ. ಈಗಾಗಲೇ ಮೊದಲ ಹಂತ ಶಿವರಾಮ ಕಾರಂತ ಬಡಾವಣೆಗಾಗಿ 2008 ನಲ್ಲಿ ಪ್ರಿಲಿಮಿನರಿ ನೊಟಿಫಿಕೇಶನ್ ಮಾಡಿ ಇಲ್ಲಿಯವರೆಗೆ ಲೇಔಟ್ ನಿರ್ಮಿಸಿಲ್ಲ.ಭೂಮಿ ಕೊಟ್ಟ ರೈತರಿಗೆ ಪರಿಹಾರ ಸಿಕ್ಕಿಲ್ಲ.ಹೀಗಿರುವಾಗ ಮತ್ತೆ ಶಿವರಾಮ ಕಾರಂತ ಮುಂದುವರೆದ ಬಡಾವಣೆ ಮಾಡೋಕೆ ಅಂತ ಹೊರಟಿದೆ
ಸದ್ಯ ಬಿಡಿಎ ಅಧಿಕಾರಿಗಳು ಇರೋದನ್ನ ನೆಟ್ಟಿಗೆ ಮಾಡ್ತಿಲ್ಲ.ಇದೀಗ ಮತ್ತೊಂದು ಲೇಔಟ್ ಬೇಕಾ ಎನ್ನುತ್ತಿದ್ದಾರೆ ರೈತರು.ಹೊಸ ಲೇಔಟ್ ಗೆ ಜೀವ ನೀಡ್ತಿರೋದಕ್ಕೆ ರೈತರ ಜೀವ ಬಲಿಯಾಗುತ್ತೆ ಅಂತ ಇದಕ್ಕೆ ವಿರೋಧ ವ್ಯಕ್ತವಾಗ್ತಿದೆ.ಆದ್ರೂ ಬಿಡಿಎ ಮಾತ್ರ ಶಿವರಾಮ ಕಾರಂತ ಮುಂದುವರೆದ ಬಡಾವಣೆ ಮಾಡೇ ತಿರುತ್ತೇವೆ ಎಂದು ಬಿಡಿಎ ಹೊರಟಿರೋದು ಮುಂದೆ ಏನೆಲ್ಲಾ ತಿರುವುಗಳನ್ನ ಪಡೆದುಕೊಳ್ಳುತ್ತೆ ಅನ್ನೋದನ್ನ ಕಾದುನೋಡಬೇಕಿದೆ