ಬೆಂಗಳೂರು: ಜಗದೀಶ್ ಶೆಟ್ಟರ್ ಮತ್ತೆ ಬಿಜೆಪಿ ಸೇರಿದ್ದು ಕೇಳಿ ನಮಗೂ ಆಶ್ಚರ್ಯ ಆಯ್ತು, ಇದೊಂದು ದುರದೃಷ್ಟಕರ ವಿಚಾರ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ
ನಗರದಲ್ಲಿ ಮಾತನಾಡಿದ ಅವರು, ಅವರ ಮತಕ್ಷೇತ್ರದಲ್ಲಿ ಪಕ್ಷಕಟ್ಟಿ ಬೆಳೆಸಿದ್ರು ಕೇವಲ ಒಂದು ಟಿಕೆಟ್ ಕೊಡಲಿಲ್ಲ ಅಂತ ಸಂದರ್ಭದಲ್ಲಿ ನಾವು ಟಿಕೆಟ್ ಕೊಟ್ವಿ ಅವ್ರು ಪರಾಭವಗೊಂಡ್ರು, ಆದ್ರೂ ಎಂಎಲ್ ಸಿ ಮಾಡಿದ್ವಿ ಅವರನ್ನ ಗೌರವಿಸುವ ಕೆಲಸ ಮಾಡಿದ್ವಿ ಎಂದರು.
ಪಾರ್ಲಿಮೆಂಟ್ ಎಲೆಕ್ಷನ್ ನಂತ್ರ ಅವರಿಗೆ ಒಳ್ಳೆಯ ಭವಿಷ್ಯ ಇತ್ತು ಆದ್ರೂ ಕೂಡ ತರಾತುರಿಯಲ್ಲಿ ಹೋಗಿದ್ದಾರೆ ಅವರು ಮಾಜಿ ಸಿಎಂ, ಅವರ ಮೇಲೆ ಏನ್ ಒತ್ತಡ ಇತ್ತೋ ಏನ್ ಆಮೀಷ ಒಡ್ಡಿದ್ದರೋ ಗೊತ್ತಿಲ್ಲ ಒಂದ್ವೇಳೆ ಆಮೀಷ ಒಡ್ಡಿದ್ದರೆ, ಅದಕ್ಕೆ ನಿರ್ಧಾರ ತೆಗೆದುಕೊಂಡಿದ್ರೆ ದುರದೃಷ್ಟಕರ ಅವ್ರು ಏನ್ ಹೇಳ್ತಾರೋ, ಏನ್ ಕಾರಣ ಕೊಡ್ತಾರೋ ನೋಡೋಣ
ಆಮೀಷ ಒಳಗಾಗಿದ್ರೆ ಅವರ ಘನತೆಗೆ ಹಿನ್ನಡೆ ಆಗುತ್ತೆ ನಮಗೆ ಹಿನ್ನಡೆ ಅಂತಲ್ಲ ಇವರ ವೈಯಕ್ತಿಯ ನಿರ್ಧಾರಕ್ಕೆ ಲಿಂಗಾಯತರು ಒಪ್ಪಬೇಕಿಲ್ಲ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು.