ಬೆಂಗಳೂರು: ಶೆಟ್ಟರ್ ಮತ್ತೆ ಇಂದು ಬಿಜೆಪಿ ಸೇರಿರುವ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ನಿನ್ನೆ ಬೆಳಿಗ್ಗೆ ನನ್ನ ಜೊತೆ ಮಾತನಾಡಿದ್ದರು ಆಗಲೂ ಹೇಳಿದರು ಆ ರೀತಿ ಏನು ಇಲ್ಲಾ ಅಂತ ಈಗ ಈ ತೀರ್ಮಾನ ಕೈಗೊಂಡಿದ್ದಾರೆ… ಅವರು ಮಾತನಾಡಲಿ ಮೊದಲು ಅವರು ಮಾತನಾಡಿದ ನಂತರ ನಾನು ಪ್ರತಿಕ್ರಿಯಿಸುತ್ತೇನೆ ಆದರೆ ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಹೇಳಿದರು.
35 ಸಾವಿರ ಮತಗಳ ಅಂತರದಲ್ಲಿ ಸೋತಾಗಲು ನಾವು ಗೌರವದಿಂದ ಅವರನ್ನ ಎಂಎಲ್ ಸಿ ಮಾಡಿದ್ದೇವೆ ಯಾವ ಕಾರಣಕ್ಕೆ ಹೋಗಿದ್ದಾರೆ ಯಾವುದಾದರೂ ಒತ್ತಡದಿಂದ ಹೋಗಿದ್ದಾರಾ…? ದೇಶದ ಹಿತಕ್ಕಾಗಿ ಹೋದರೆ, ಅವತ್ತು ಟಿಕೆಟ್ ತಪ್ಪಿದಾಗ ದೇಶದ ಹಿತ ಇರಲಿಲ್ವಾ…? ಎಂದು ಪ್ರಶ್ನೆ ಮಾಡಿದರು
ಶೆಟ್ಟರ್ ಕೇಸ್ ಬೇರೆ, ಇನ್ನು ಬೇರೆ ಯಾರು ಕಾಂಗ್ರೆಸ್ ಬಿಡಲ್ಲ ಯಾರೂ ಹೋಗಲ್ಲ ಎಂದು ಹೇಳಿದರು.