ಹೊಸಪೇಟೆ: ತುಂಗಭದ್ರಾ ವಿಜಯನಗರ ಕಾಲುವೆಗೆ ಶಾಸಕ ಎಚ್.ಆರ್.ಗವಿಯಪ್ಪ ಬುಧವಾರ ನೀರು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸತತ ಪ್ರಯತ್ನದ ಫಲವಾಗಿ ಕಾಡಾ ಅಧ್ಯಕ್ಷರು ಸಹಕಾರದೊಂದಿಗೆ ವಿಜಯನಗರ ಕಾಲುವೆಗೆ ಪ್ರತಿ ದಿನ ನೀರು ಬಿಡಲಾಗುವುದು ಎಂದರು. ಇಂದಿನಿಂದ ಮೇ 30 ರವರೆಗೆ ನೀರನ್ನು ಕಾಲುವೆಗೆ ಬಿಡುಗಡೆ ಮಾಡಲಾಗುತ್ತದೆ.
ಇದರಿಂದ 12 ಸಾವಿರ ಎಕರೆ ಕಬ್ಬು ರೈತರು ಹಾಗೂ 4 ರಿಂದ 5 ಎಕರೆ ಬಾಳೆ ರೈತರು ತಮ್ಮ ಹೊಲಗಳಿಗೆ ನೀರು ಹರಿಸಲು ಅನುಕೂಲವಾಗಲಿದೆ ಎಂದರು.