ಬಳ್ಳಾರಿ: ಕುರಗೋಡು ಪುರಸಭೆ ಬಿಲ್ ಕಲೆಕ್ಟರ್ ಹೊನ್ನೂರ್ ಸಾಬ್ 6 ಸಾವಿರ ರೂ. ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ನಿವೇಶನದ ಸ್ಕೆಚ್ ನೀಡಲು ಮಹೇಶ್ ಎಂಬುವರ ಬಳಿ ಲಂಚ ಸ್ವೀಕರಿಸುವಾಗ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಕುರುಗೋಡು ನಿವಾಸಿ ಮಹೇಶ್ ಎನ್ನುವರು ನಿವೇಶನದ ಸ್ಕೆಚ್ ನೀಡುವಂತೆ ಮನವಿ ಮಾಡಿದ್ದರು.
ಮಹೇಶ್ ಬಳಿ ಬಿಲ್ ಕಲೆಕ್ಟರ್ ಹೊನ್ನೂರಸಾಬ್ 6 ಸಾವಿರ ಲಂಚ ಕೇಳಿದ್ದರು. ಹಣ ನೀಡಿದ್ದರೇ ಕೆಲಸ ಮಾಡಿಕೊಡುವುದಿಲ್ಲ ಎಂದು ಹೇಳಿದ್ದರು. ಹೀಗಾಗಿ ಲೋಕಾಯುಕ್ತರಿಗೆ ದೂರು ನೀಡಿದ್ದ ಮಹೇಶ್, ನಿನ್ನೆ ರಾತ್ರಿ ಲಂಚದ ಹಣ ಸ್ವೀಕರಿಸುವಾಗ ಲೋಕಾಯುಕ್ತ ಪೊಲೀಸರ ದಾಳಿ ಮಾಡಿ ಹೊನ್ನೂರಸಾಬ್ನನ್ನು ವಶಕ್ಕೆ ಪಡೆದಿದ್ದಾರೆ.