ಬೆಳಗಾವಿ: ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಟಾಪನೆ ಹಿನ್ನಲೆ ಬೆಳಗಾವಿಯ ನಗರದಲ್ಲಿ ರಾಮನ ಸ್ಮರಿಸುವ ಮೂಲಕ ವಿಶೇಷ ಪೂಜೆ ಮಾಡಲಾಯಿತು. ಮಹಿಳೆಯರು ರಾಮನ ಜಪ ಮಾಡುವುದರ ಮೂಲಕ ಪ್ರಾರ್ಥನೆ ಸಲ್ಲಿಕೆ ಮಾಡಿದರು. ಮಂದಿರದಲ್ಲಿ ಈ ಬಾರಿ ರಾಮನಿಗೆ ವಿಶೇಷ ಪೂಜೆ ಸಲ್ಲುವಂತೆ ಬೆಳಗಾವಿಯಲ್ಲಿ ಎಲ್ಲಿ ನೋಡಿದ್ದರು ಭಗವಮಯ ರಾಮನ ಪ್ರತಿಮೆ ಧ್ವಜಗಳು ಕಟೌಟ್ ಬ್ಯಾನರ್ ಸ್ವಾಗತದ ಫಲಕಗಳು ಕೆಂಗಳಿಸುತ್ತಿವೆ.
ಇದು ದೇಶದಲ್ಲಿ ಅತ್ಯಂತ ದೊಡ್ಡ ಹಬ್ಬವಾಗಿ ಮಾಡುತ್ತಿರುವುದರ ಮೂಲಕ ಉಂಡಿ ಜಿಲೇಬಿ ಸಿಹಿ ಹಂಚುವುದು ಹತ್ತು ಹಲವಾರು ಕಡೆ ಮಹಾಪ್ರಸಾದ ಆಯೋಜಿಸಲಾಗಿದೆ ರಾಮಭಕ್ತರು ಇತರ ಲಾಭ ಪಡೆಯುತ್ತಿದ್ದಾರೆ. ಎಲ್ಲಿ ನೋಡಿದರೂ ಬೆಳಗಾವಿಯಲ್ಲಿ ಮೂಲಿ ಮೂಲಿ ಗಲ್ಲಿ ಗಲ್ಲಿಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದ್ದು ಇದೊಂದು ವಿಶೇಷವಾಗಿದೆ.