ಬೆಂಗಳೂರು:- ರಾಜಧಾನಿ ಬೆಂಗಳೂರಿನಲ್ಲಿ ಒಂದೆಡೆ PSI ಮರು ಪರೀಕ್ಷೆ ನಡೆಯುತ್ತಿದ್ದು, ಮತ್ತೊಂದೆಡೆ ಪರೀಕ್ಷೆ ಬರೆಯುವ ಮುನ್ನವೇ ಕೈಗೆ ಅಭ್ಯರ್ಥಿಯೋರ್ವ ಗಾಯ ಮಾಡಿಕೊಂಡಿದ್ದಾನೆ.
ಗದಗದಿಂದ ಬೆಂಗಳೂರಿಗೆ ಪಿಎಸ್ ಐ ಪರೀಕ್ಷಾ ಅಭ್ಯರ್ಥಿ ಬಂದಿದ್ದು, ಎರಡು ವರ್ಷದ ಹಿಂದೆ ಕೈಗೆ ಹಾಕಿದ್ದ ಕಡಗ ತೆಗೆಯುವಂತೆ ಭದ್ರತಾ ಸಿಬ್ಬಂದಿಗಳು ಸಲಹೆ ಕೊಟ್ಟಿದ್ದಾರೆ. ಹೀಗಾಗಿ ಕೈಗರ ಹಾಕಿದ್ದ ಕಡಗ ತೆಗೆಯಲು ಅಭ್ಯರ್ಥಿ ಪರದಾಟ ನಡೆಸಿದ್ದಾರೆ. ಶಾಂಪೂ ಬಳಸಿ ಕೈನಲ್ಲಿದ್ದ ಕಡಗ ತೆರವು ಮಾಡಿದ್ದಾನೆ.
ಕಡಗ ತೆಗೆಯುವ ವೇಳೆ ಕೈಗೆ ಅಭ್ಯರ್ಥಿ ಗಾಯ ಮಾಡಿಕೊಂಡಿದ್ದಾನೆ.