ಹುಬ್ಬಳ್ಳಿ: ಅಯೋಧ್ಯೆಯ ಭವ್ಯವಾದ ಶ್ರೀ ರಾಮ ಮಂದಿರದಲ್ಲಿ ಶ್ರೀ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಅಂಗವಾಗಿ ನಗರದ ಘೋಡಕೆ ಓಣಿ ಹಳೇ ಹುಬ್ಬಳ್ಳಿಯಲ್ಲಿ ಢೋರ ಕಕ್ಕಯ್ಯಾ ಸಮಾಜದ ವತಿಯಿಂದ ಏಳು ಮಕ್ಕಳ ತಾಯಿ ದೇವಸ್ಥಾನ ಆವರಣದಲ್ಲಿ ಶ್ರೀ ರಾಮ ಭಾವ ಚಿತ್ರಕ್ಕೆ ಪುಪ್ಪಾರ್ಚನೆ ಯೊಂದಿಗೆ ಶ್ರದ್ಧೆಯಿಂದ ಪೂಜೆ ನರೆವೇರಿಸಲಾಯಿತು. ಈ ಅವಧಿಯಲ್ಲಿ ಘೋಡಕೆ ಓಣಿಯ ಪಂಚಾಯತ್ ಅಧ್ಯಕ್ಷ ಗುರುನಾಥ ಘೋಡಕೆ,
ಪ್ರಧಾನ ಕಾರ್ಯದರ್ಶಿ ಲಕ್ಷ್ಮೀಕಾಂತ ಘೋಡಕೆ, ಅರುಣೋದಯ ಯುವಕ್ ಮಾಡಳದ ಅಧ್ಯಕ್ಷ ವಿನೋದ್ ಹುಟಗಿ, ಪ್ರಧಾನ ಕಾರ್ಯದರ್ಶಿ ರಾಜೇಶ್ ಹೋಟಕರ, ಮಧುಕರ ಘೋಡಕೆ, ಅನಿಲ ನಾರಾಯಣಕರ, ಬಾಳು ಪೋಳ್, ಮಾಣಿಕರಾವ್ ಘೋಡಕೆ, ರವಿಕುಮಾರ್ ಹುಟಗಿ, ಶ್ರೀನಿವಾಸ್ ಘೋಡಕೆ ಕಿರಣ ಘೋಡಕೆ, ಸಿದ್ದಪ್ಪ ಘೋಡಕೆ, ಮಹಿಳೆಯರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಓಣಿಯ ನಾಗರಿಕರು ಭಾಗವಹಿದ್ದರು.