ಹುಬ್ಬಳ್ಳಿ: ನಾಟ್ಯಾಂಜಲಿ ಕಲಾಮಂದಿರ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸವಾಯಿ ಗಂಧರ್ವ ಹಾಲ್ ಹುಬ್ಬಳ್ಳಿಯಲ್ಲಿ ಜರುಗಿತು. ಸುಮಾರು 21 ನೃತ್ಯಗಳು 200 ವಿದ್ಯಾರ್ಥಿಗಳಿಂದ
ನೃತ್ಯಕಾರ್ಯಕ್ರಮವು ನೆರವೇರಿಸಲ್ಪಟ್ಟಿತು. ಕಿಕ್ಕಿರಿದ ಸಭಾಂಗಣದಲ್ಲಿ ಪ್ರಮುಖವಾಗಿ ಸೀತಾರಾಮ ಕಲ್ಯಾಣ ಹಾಗೂ ಮಹಿಷಾಸುರ ನೃತ್ಯರೂಪಕಗಳು ಪ್ರೇಕ್ಷಕರನ್ನು ಮನರಂಜಿಸಿ ಮಂತ್ರ ಮುಗ್ದರನ್ನಾಗಿಸಿತು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ವಿದುಷಿ ಸುನೀತಾ ಪೂಜಾರಿ, ಮುಖ್ಯ ಅತಿಥಿಗಳಾಗಿ ಜಿ. ಎಸ್. ಗದಗ, ಅಧ್ಯಕ್ಷತೆಯನ್ನು
ವಿನೋದ ಮುಕ್ತೆದಾರ ವಹಿಸಿದ್ದರು.ಈ ಸಂದರ್ಭದಲ್ಲಿ ನಾಟ್ಯ ವಿದೂಷಿ ರೋಹಿಣಿ ಭಟ್ಟಕೂರ್ಸೆ ಹಾಗೂ ವಿದೂಷಿ ಅಲ್ಕಾ ಪ್ರಭು ಇವರಿಗೆ ನಾಟ್ಯರಮಣಿ ಎಂಬ ಬಿರುದಿನಿಂದ ಸನ್ಮಾನಿಸಲಾಯಿತು.
ಹಾಗೇ ನಾಟ್ಯಾಂಜಲಿ ಕಲಾಮಂದಿರದ ಅಧ್ಯಕ್ಷೆ ವಿದೂಷಿ ಸೌಭಾಗ್ಯ (ವನಿತಾ) ಮಹಾಲೆ ಇವರಿಗೆ ಗುರು ವಂದನೆಯನ್ನು ಮಾಡಲಾಯಿತು. ವಿಶೇಷವಾಗಿ ಕೊನೆಯಲ್ಲಿ 200 ವಿದ್ಯಾರ್ಥಿಗಳಿಂದ ಒಂದೇ ವೇದಿಕೆಯಲ್ಲಿದ್ದರು ರಾಮಮಂದಿರದ ಪ್ರಾಣಪ್ರತಿಷ್ಠಾಪನೆಉದ್ಘಾಟನೆಯ ಅಂಗವಾಗಿ ಮಕ್ಕಳಿಂದ ರಾಮ ಭಜನೆ ನೃತ್ಯವನ್ನು ಮಾಡಲಾಯಿತೆಂದು ಸಂಘದ ಅಧ್ಯಕ್ಷೆ ವಿದೂಷಿ ಸೌಭಾಗ್ಯ ಮಹಾಲೆ ತಿಳಿಸಿದರು.