ಧಾರವಾಡ: ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಪ್ರಾಣ ಪ್ರತಿಷ್ಠಾನ ಇಂದು ನೇರವೇರಿದ ಹಿನ್ನೆಲೆಯಲ್ಲಿ, ಧಾರವಾಡದಲ್ಲಿ ಕ್ಷೌರಕರೊಬ್ಬರು ಗ್ರಾಹಕರಿಗೆ ಉಚಿತ ಕಟ್ಟಿಂಗ್ ಮಾಡುವ ಮೂಲಕ ಶ್ರೀರಾಮನ ಮೇಲೆನ ಭಕ್ತಿ ಸಮರ್ಪಿಸಿದ್ದಾರೆ.
ಧಾರವಾಡದ ನಿವಾಸಿಯಾದ ಶಿವಾನಂದ ಹಡಪದ ಎಂಬಾತರೇ ಉಚಿತವಾಗಿ ತಮ್ಮ ಕ್ಷೌರಿಕ್ ಶಾಪನಲ್ಲಿ ಉಚಿತವಾಗಿ ಇಂದು ಒಂದು ದಿನ ಕಟ್ಟಿಂಗ್ ಮಾಡುವ ಸಂಕಲ್ಪ ಮಾಡಿದ್ದಾರೆ. ಅಪ್ಪ ರಾಮ ಹಾಗೂ ಹನುಮಂತ ಭಕ್ತರಾಗಿರೋ ಶಿವಾನಂದವರು ಈ ಹಿಂದಿನಿಂದಲೂ ಜಯಂತಿಗಳಂದು ವಿಶೇಷ ಕಾರ್ಯಗಳನ್ನು ಮಾಡಿಕೊಂಡು ಬಂದಿದ್ದಾರೆ.
ಅಯೋಧ್ಯಯಲ್ಲಿ ಐತಿಹಾಸಿಕ ಶ್ರೀರಾಮ ಮೂರ್ತಿ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಉಚಿತ ಕಟ್ಟಿಂಗ ಮಾಡಿ ತಮ್ಮ ಭಕ್ತಿ ತೋರಿದ್ದಾರೆ. ಜೊತೆಗೆ ಸಾರ್ವಜನಿಕರಿಗೆ ಇಂದು ಸಂಜೆಯವರೆಗೆ ಪಲಾವ್ ನೀಡಿ ದೇವರ ಕೃಪೆಗೆ ಪಾತ್ರರಾಗಿದ್ದಾರೆ.