ಕಲಬುರ್ಗಿ:- ಅತ್ತ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರ ಮಂದಿರ ಉದ್ಘಾಟನೆ ಆಗುತಿದ್ರೆ ಇತ್ತ ಕಲಬುರಗಿಯಲ್ಲಿ ರಾಮ ಹನುಮನ ಜಪ ಬೆಳಿಗ್ಗೆಯಿಂದಲೇ ಶುರುವಾಗಿದ್ದು ಜಗತ್ ಬಡಾವಣೆಯಲ್ಲಿ ಮಹಿಳಾ ಭಜನಾ ಮಂಡಳಿ ಸದಸ್ಯರು ಹನುಮಾನ ಚಾಲಿಸಾ ಪಠಣೆ ಮಾಡಿದ್ರು.
ಹಲವು ದಶಕಗಳಿಂದ ಕಂಡಿರುವ ಕನಸು ನನಸಾದ ಹಿನ್ನಲೆ ಇವತ್ತು ಇಡೀದಿನ ರಾಮ ಮತ್ತು ಹನುಮಾನ ಮಂದಿರಗಳಲ್ಲಿ ಹೋಮ ಹವನ ಪೂಜೆ ಪುನಸ್ಕಾರ ನಿರಂತರವಾಗಿ ನಡೆಯುತ್ತಿದೆ..