ಬೆಂಗಳೂರು: ಅಯೋಧ್ಯೆಯ ಶ್ರೀರಾಮ ಪ್ರಾಣಪ್ರತಿಷ್ಠಾ ಕಾರ್ಯಕ್ಕೆ ಕ್ಷಣಗಣನೆ ಶುರುವಾಗಿದ್ದು, ಹಿಂದೂಗಳ ಬಹುವರ್ಷಗಳ ಕನಸಿಗೆ ಕೆಲವೇ ಕೆಲವು ಗಂಟೆ ಬಾಕಿ ಉಳಿದಿದೆ.
ಪ್ರತಿ ಮನೆ..ಮನೆಯಲ್ಲಿಯೂ ಜಯ ಶ್ರೀ ರಾಮನ ನಾಮ ಸ್ಮರಣೆ ಮಾಡಲಾಗುತ್ತಿದೆ. ಅದರಂತೆ ಕಲಾವಿದನೋರ್ವ ಮಗಳ ಕೆನ್ನೆಯ ಮೇಲೆಯೇ ಶ್ರೀರಾಮನ ಚಿತ್ರ ಬಿಡಿಸಿದ್ದಾರೆ. ಕಲಾವಿದ ಯಲ್ಲಪ್ಪ ವೈ.ಕುಂಬಾರ ಕಲೆಗೆ ಜನ್ರು ಫಿದಾ ಆಗಿದ್ದಾರೆ.
ಶ್ರೀರಾಮನ ಆಗಮನವನ್ನು ನಮ್ಮಮನೆಯಲ್ಲಿ ವಿಶೇಷವಾಗಿ ಆಚರಣೆ ಮಾಡುತ್ತಿದ್ದೇವೆ ಎಂದು ಕಲಾವಿದ ಹೇಳಿದ್ದಾರೆ.